Advertisement

Doddangudde ಆದಿಶಕ್ತಿ ಕ್ಷೇತ್ರದಲ್ಲಿ ಅ.22 ರಂದು ಶ್ರೀ ಲಲಿತ ಸಹಸ್ರ ಕದಳಿ ಮಹಾಯಾಗ

05:13 PM Aug 20, 2024 | Team Udayavani |

ಉಡುಪಿ: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಅಗಸ್ಟ್ 22 ರ ಗುರುವಾರ ಶ್ರೀ ಲಲಿತಾ ಸಹಸ್ರ ಕದಳಿ ಮಹಾಯಾಗ ನಡೆಯಲಿದೆ.

Advertisement

ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಶ್ರೀ ಗಣೇಶ್ ಸರಳಾಯ ನೇತೃತ್ವದಲ್ಲಿ ಮಹಾಯಾಗ ನೆರವೇರಲಿದೆ.

ಯಾಗ ಅಗಸ್ಟ್ 22 ರಂದು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 12:30ಕ್ಕೆ ಪೂರ್ಣಾಹುತಿಯಾಗಲಿದೆ. ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾಧನೆ ಸಂತರ್ಪಣೆ ನೆರವೇರಲಿದೆ.

ಶ್ರೀಚಕ್ರ ಪೀಠ ಸುರಪೂಜಿತೆ ರಾಜರಾಜೇಶ್ವರಿಯನ್ನು ಆರಾಧಿಸಿ ಅನುಗ್ರಹ ಯಾಚಿಸುವ ಈ ಮಹಾನ್ ಯಾಗ ಮುಂಬೈಯ ಉದ್ಯಮಿಯಿಂದ ಸಮರ್ಪಿತವಾಗಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next