Advertisement

ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಂಭ್ರಮದ ಮಹಾಶಿವರಾತ್ರಿ

12:30 PM Feb 27, 2017 | Team Udayavani |

ಪುಂಜಾಲಕಟ್ಟೆ :  ಕಾರಿಂಜ ಮಹತೋಭಾರ  ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಜಾತ್ರೋತ್ಸವವು  ಪೂರ್ವ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಂಭ್ರಮದಿಂದ ಜರಗಿತು.  

Advertisement

ಫೆ.25ರಂದು ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನ ಬಲಿ, ಮಧ್ಯಾಹ್ನ  ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಪಾರ್ವತಿ -ಪರಮೇಶ್ವರ ದೇವರ ಭೇಟಿ, ಚಂದ್ರಮಂಡಲ ಉತ್ಸವ, ಬೆಳಗ್ಗೆ ಶಯನೋತ್ಸವ ,
ಕವಾಟ ಬಂಧನ, ಪ್ರಸಾದ ವಿತರಣೆ, ಫೆ.26ರಂದು   ಬೆಳಗ್ಗೆ ಮಹಾರಥೋತ್ಸವ, ದೈವದ ನೇಮ,  ಮಹಾಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ರಾಜ್ಯ ಅರಣ್ಯ ಸಚಿವ  ಬಿ. ರಮಾನಾಥ ರೈ, ಸಂಸದ ನಳಿನ್‌ ಕುಮಾರ್‌ ಕಟೀಲು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ, ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ ಜೈನ್‌,  ಚಂದ್ರಪ್ರಕಾಶ್‌ ಶೆಟ್ಟಿ, ಕೆ. ಮಾಯಿಲಪ್ಪ  ಸಾಲ್ಯಾನ್‌,  ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್‌ ಕುಮಾರ್‌ ರೈ, ಮಾಜಿ ಅಧ್ಯಕ್ಷ ಮಾಣಿಕ್ಯರಾಜ್‌ ಜೈನ್‌, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಗೌಡ  ಮತ್ತಿತರರು ಉಪಸ್ಥಿತರಿದ್ದರು.
 
ದೇಗುಲದ  ಪ್ರಧಾನ ಅರ್ಚಕ ನಟರಾಜ ಉಪಾಧ್ಯಾಯ, ಅರ್ಚಕರಾದ ಮಿಥುನ್‌ರಾಜ್‌ ನಾವುಡ, ರಾಘವೇಂದ್ರ ಭಟ್‌, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಿ., ಯು. ಸದಾಶಿವ ಪ್ರಭು, ಟಿ. ಕೃಷ್ಣಪ್ಪ ಗೌಡ, ಪಿ. ವಿಶ್ವನಾಥ ಪೂಜಾರಿ, ವೆಂಕಪ್ಪ ನಾಯ್ಕ, ಪಿ. ಸುಜಲಾ  ಶೆಟ್ಟಿ, ಸವಿತಾ ಮತ್ತು ಸಿಬಂದಿ ವರ್ಗ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next