Advertisement

ಮಾರ್ಚ್‌-22ಕ್ಕೆ ವಿಶೇಷ ಸೆಟ್‌

12:21 PM Feb 05, 2017 | |

ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ಹೊಸ ಚಿತ್ರ “ಮಾರ್ಚ್‌-22′ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗ ಚಿತ್ರ ತಂಡ ಇದೀಗ ಬೈಲಹೊಂಗಲದ ಚಚಡಿಯಲ್ಲಿ ಬೀಡು ಬಿಟ್ಟಿದೆ.

Advertisement

ಚಚಡಿಯಲ್ಲಿಯೇ ಈ ಚಿತ್ರದ ಕಲಾ ನಿರ್ದೇಶಕರಾದ ವಸಂತರಾವ್‌ ಎಂ ಕುಲಕರ್ಣಿಯವರು ನಿರ್ಮಿಸಿರುವ ಮಸೀದಿಯ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ನೀರಲ್ಲಿಯೂ ಜಾತಿ ಧರ್ಮ ನೋಡುವವರೂ ಇರಬಹುದು. ಆದರೆ ನೀರಿಗೆ ಅಂಥ ಯಾವುದೇ ಕಟ್ಟು ಪಾಡುಗಳಿಲ್ಲ. ಅದು ಇಡೀ ಜೀವ ಸಂಕುಲದ ಜೀವಧಾತು. ಅದು ಜಾತಿ, ಧರ್ಮ, ಪಂಥಗಳನ್ನು ಮೀರಿದ್ದು. ಇಂಥಾದ್ದೇ ಜೀವಪರ ಆಶಯವುಳ್ಳ ಕಥೆ ಹೊಂದಿರುವ ಕಾರಣ ಚಿತ್ರಕ್ಕೆ “ಮಾರ್ಚ್‌-22′ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಆರ್ಯವರ್ಧನ, ಕಿರಣ್‌ ರಾವ್‌, ಮೇಘಶ್ರೀ, ದೀಪಾ ಶೆಟ್ಟಿ, ಶರತ್‌ ಲೋಹಿತಾಶ್ವ, ರವಿಶಂಕರ್‌, ರವಿಕಾಳೆ, ಜೈಜಗದೀಶ್‌, ವಿನಯಾ ಪ್ರಸಾದ್‌, ಪದ್ಮಜಾ ರಾವ್‌, ಪವಿತ್ರ ಲೋಕೇಶ್‌ ಮುಂತಾದವರ ತಾರಾಗಣವಿದೆ.

ಇನ್ನುಳಿದಂತೆ ರವಿಶೇಖರ್‌ ಸಂಗೀತ, ಸುಭಾಶ್‌ ಕಡಕೋಳ ಕಲೆ, ಕೆ ಜಗದೀಶ ರೆಡ್ಡಿ ಸಹಕಾರ ನಿರ್ದೇಶನ, ಬಿ.ಎ ಮಧು ಸಂಭಾಷಣೆ, ಕರ್ವಾ ಖ್ಯಾತಿಯ ಮೋಹನ್‌ ಅವರ ಛಾಯಾಗ್ರಹಣ, ಬಸವರಾಜ ಅರಸ್‌ ಸಂಕಲನವಿರುವ ಈ ಚಿತ್ರಕ್ಕೆ ಹರೀಶ್‌ ಶೇರೆಗಾರ್‌, ನರೇಂದ್ರ ಹಾಗೂ ರಾಜಶೇಖರ್‌ ನಿರ್ಮಾಪಕರಾಗಿ¨ªಾರೆ. 

Advertisement

Udayavani is now on Telegram. Click here to join our channel and stay updated with the latest news.

Next