Advertisement

ಸ್ಪೀಕರ್‌ ಧ್ವನಿ ಕಡಿಮೆ ಶಾಶ್ವತ ಪರಿಹಾರವಲ್ಲ: ಶಾಸಕ ಭಟ್‌

02:49 AM May 07, 2022 | Team Udayavani |

ಉಡುಪಿ: ಲೌಡ್‌ ಸ್ಪೀಕರ್‌ಗಳಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂಬ ದೂರುಗಳಿವೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಅನೇಕ ಕಡೆಗಳಲ್ಲಿ ಸ್ಪೀಕರ್‌ ಧ್ವನಿ ಕಡಿಮೆ ಮಾಡಲಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಹೀಗಾಗಿ ಎಲ್ಲ ಕಡೆ ಸೌಂಡ್‌ಬಾಕ್ಸ್‌ ಅಳವಡಿಸುವಂತೆ ಮನವೊಲಿಸಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದರು.

Advertisement

ಲೌಡ್‌ ಸ್ಪೀಕರ್‌ ಬಳಸುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಎಲ್ಲ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಬಾಕ್ಸ್‌ ಸ್ಪೀಕರ್‌ ಬಳಸುವುದು ಸೂಕ್ತ. ಇದರಿಂದ ಧ್ವನಿ ಆವರಣದ ಹೊರಗೆ ಕೇಳಿಸುವುದಿಲ್ಲ ಎಂದರು.

ಸೈಂಟ್‌ ಮೇರೀಸ್‌ನಲ್ಲಿ ಗೈಡ್‌ಗಳ ನೇಮಕ
ಸೈಂಟ್‌ ಮೇರೀಸ್‌ ದ್ವೀಪದಲ್ಲಿ ಯಾವುದೇ ಭದ್ರತ ಲೋಪದಿಂದ ದುರ್ಘ‌ಟನೆ ಸಂಭವಿಸಿಲ್ಲ. ಗುಂಪಾಗಿ ಬರುವ ಪ್ರವಾಸಿಗರು ನಿರ್ದೇಶನಗಳನ್ನು ಉಲ್ಲಂಘಿಸಿ ಸೆಲ್ಫಿ ತೆಗೆಯಲು ಹೋಗಿ ದುರಂತ ಸಂಭವಿಸಿದೆ. ಆದ್ದರಿಂದ ಪುರಾತತ್ವ ಇಲಾಖೆ ಅನುಮತಿ ಪಡೆದು ಅಧಿಕೃತ ಫೋಟೋಗ್ರಾಫ‌ರ್‌ ನೇಮಕ, ಸೆಲ್ಫಿ ಪಾಯಿಂಟ್‌ ರಚನೆ, ಗೈಡ್‌ಗಳ ನೇಮಕಕ್ಕೆ ನಿರ್ಧರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next