Advertisement

ಬೆಂಗಳೂರಿಗರಿಗೆ ಸೋನು ಅಭಯ

03:43 PM May 15, 2021 | Team Udayavani |

ಕೋವಿಡ್ ಎರಡನೇ ಅಲೆಯ ತೀವ್ರತೆಯಿಂದ ಬೆಂಗಳೂರಿನ ಆಸ್ಪತ್ರೆಗಳಲ್ಲಿಕೋವಿಡ್‌ ಸೋಂಕಿತರಿಗೆ ಆಕ್ಸಿಜನ್‌ ಕೊರತೆಎದುರಾಗಿದ್ದು, ಇದೇ ವೇಳೆ ಅತ್ಯಂತತುರ್ತು ಸಂದರ್ಭದಲ್ಲಿ ಬೆಂಗಳೂರಿಗರ ಮನೆ ಬಾಗಲಿಗೆ ಆಕ್ಸಿಜನ್‌ ವ್ಯವಸ್ಥೆ ಕಲ್ಪಿಸುವ ಕೆಲಸಕ್ಕೆ ಬಹುಭಾಷಾ ನಟ ಸೋನು ಸೂದ್‌ ಕೈಹಾಕಿದ್ದಾರೆ.

Advertisement

ಕಳೆದ ಒಂದು ವರ್ಷದಿಂದಕೊರೊನಾ ಸೋಂಕಿತರ ಜೀವ ಉಳಿಸಲುಶ್ರಮಿಸುತ್ತಿರುವ ನಟ ಸೋನು ಸೂದ್‌ ಮತ್ತು ತಂಡದ ಸದಸ್ಯರು “ಸೂದ್‌ ಫೌಂಡೇಶನ್‌’ ಸ್ವಯಂ ಸೇವಾ ಸಂಸ್ಥೆಯ ಮೂಲಕ ದೇಶದ ಹಲವು ಭಾಗಗಳಲ್ಲಿ ಕೊರೊನಾ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುತ್ತಿದ್ದಾರೆ.ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿಆಕ್ಸಿಜನ್‌ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ನಟ ಸೋನು ಸೂದ್‌ ತಮ್ಮ”ಸೂದ್‌ ಫೌಂಡೇಶನ್‌’ ಮೂಲಕ ಆಕ್ಸಿಜನ್‌ಕೊರತೆ ನೀಗಿಸಲು ಮುಂದಾಗಿದ್ದಾರೆ.

ಹಾಗೆಯೇ ಚಿತ್ರದುರ್ಗದ ಸೋಂಕಿತರೊಬ್ಬರು, ರೆಮಡೆಸಿವಿಯರ್‌ಗೆ ಕೋರಿಕೆಇಟ್ಟಿದ್ದು, ಇದನ್ನೂ ಪೂರೈಸುವುದಾಗಿ ಸೂದ್‌ ಭರವಸೆ ನೀಡಿದ್ದಾರೆ.ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಸೋನು ಸೂದ್‌, “ಬೆಂಗಳೂರು.ನಾನು ನಿಮ್ಮೊಂ ದಿಗಿದ್ದೇನೆ. ಭರವಸೆಯನ್ನುಜೀವಂತವಾಗಿ ಇರಿಸಿಕೊಳ್ಳಿ. ನಿಮಗೆಉಸಿರಾ ಡಲು ಸಹಕಾರಿಯಾಗು ವಂತೆ ಆಕ್ಸಿಜನ್‌ ಅನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ನಾನು ಸಹಾಯ ಮಾಡುತ್ತೇನೆ’ ಎಂದಿದ್ದಾರೆ. ಜೊತೆಗೆ ಆಕ್ಸಿಜನ್‌ ಅಗತ್ಯತೆ ಇರು ವವರುಸಂಪರ್ಕಿ ಸಲು ವಾಟ್ಸಾಪ್‌ ನಂಬರ್‌ಕೂಡ ಶೇರ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next