Advertisement

ಅಂಗವಿಕಲರ ಸಮಸ್ಯೆ ಪರಿಹರಿಸಿ

11:45 AM Dec 23, 2021 | Team Udayavani |

ಶಹಾಬಾದ: ಅಂಗವಿಕಲರ ಕುಂದು ಕೊರತೆ ನಿವಾರಿಸುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಪರಹಾರ ಒದಗಿಸಬೇಕೆಂದು ಆಗ್ರಹಿಸಿ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಮಲ್ಲೇಶಿ ಭಜಂತ್ರಿ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಆಗ್ರಹಿಸಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮನವಿ ಪತ್ರ ಸಲ್ಲಿಸಿದರು.

Advertisement

ಗ್ರಾಪಂ, ತಾಪಂ, ಜಿಪಂಗಳಿಂದ ಅಂಗವಿಕಲರಿಗೆ ನೀಡುವ ಶೇ. 5ರಷ್ಟು ಅನುದಾನವನ್ನು ಈ ಹಿಂದೆ ವಿತರಿಸಿದಂತೆ ವಿತರಿಸಬೇಕು. ಅಲ್ಲದೇ ಮೂಲಸೌಲಭ್ಯ ಒದಗಿಸಬೇಕು. ಅಂಗವಿಕಲರಿಗೆ ಯುಡಿಐಡಿ ಕಾರ್ಡ್‌ ಸುಲಭವಾಗಿ ಸಿಗುವಂತೆ ಮಾಡಬೇಕು. ಅಂಗವಿಕಲತೆ ಶೇ. 40 ಇದ್ದವರಿಗೆ ಮಾಸಿಕ ಭತ್ಯೆ 3 ಸಾವಿರ ರೂ., ಶೇ. 75 ಇದ್ದವರಿಗೆ 5 ಸಾವಿರ ರೂ. ವರೆಗೆ ಹೆಚ್ಚಿಸಬೇಕು. ರಾಜ್ಯದಲ್ಲಿ ಅಂಗವಿಕಲರ ಮಾಸಾಶನ ನಿಲ್ಲಿಸಲಾಗಿದ್ದು, ಸರ್ಕಾರ ಮರು ಆದೇಶಿಸಿ ಮಾಸಾಶನ ಆರಂಭಿಸಬೇಕು. ಅಂಗವಿಕಲರಿಗೆ ವಿಶೇಷ ಪ್ಯಾಕೇಜ್‌ ಅನುದಾನ ಬಿಡುಗಡೆ ಮಾಡಿ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಬಸವರಾಜ ಕುಂಬಾರ ತೊನಸನಹಳ್ಳಿ, ಪ್ರಕಾಶ ವಾಲೀಕಾರ, ಸುಭಾಶ್ಚಂದ್ರ ಗೋಳಾ (ಕೆ), ಬಸವರಾಜ ಶಿವರಶರಣಪ್ಪ, ವಿಜಯಲಕ್ಷ್ಮೀ ವೀರಶೆಟ್ಟಿ, ಲಕ್ಷ್ಮೀಕಾಂತ ಗೊಬ್ಬೂರಕರ್‌, ಬಬಿತಾ ರಾಠೊಡ, ಮಲ್ಲಿಕಾರ್ಜುನ ಹಳ್ಳಿ, ಲಕ್ಷ್ಮೀಕಾಂತ ವಿಠ್ಢಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next