Advertisement

ರಸ್ತೆ, ಚರಂಡಿ ಸಮಸ್ಯೆಗೆ ಪರಿಹಾರ, ಗ್ರಾಮಸ್ಥರಿಂದಲೇ ಶ್ರಮದಾನ

11:46 AM Jul 01, 2018 | |

ಪುನರೂರು : ಕಿನ್ನಿಗೋಳಿ ಗ್ರಾಮ ಪಂಚಾಯತ್‌ ವ್ಯಾಪ್ತಿ ಕುಕ್ಕುದಕಟ್ಟೆಯಿಂದ ಕೆಳಗಿನ ಪುನರೂರು ಕಾಮತ್‌ ಮಿಲ್ಲು ಹಾಗೂ ಕಳೆಗಿನ ರಸ್ತೆಯ ಇಕ್ಕಲೆಯಲ್ಲಿ ಪೂದೆ ನಿರ್ವಹಣೆ ಹಾಗೂ ಚರಂಡಿ ಕಾಮಗಾರಿ ನಡೆಯದೆ ಬಾಕಿ ಉಳಿದು ನಿತ್ಯ ಸಂಚರಿಸುವ ವಾಹನಗಳಿಗೆ ಹಾಗೂ ಜನರಿಗೆ ಅಡಚಣೆಯಾಗಿತ್ತು. ಪಂಚಾಯತ್‌ ಕಾಮಗಾರಿಯನ್ನು ಕಾಯದೆ ಗ್ರಾಮಸ್ಥರು ಹಾಗೂ ಯುವಕರ ತಂಡ ಶ್ರಮದಾನದ ಮೂಲಕ ಬ್ಲಾಕ್‌ ಆಗಿದ್ದ ಮೋರಿ ಹಾಗೂ ಚರಂಡಿಯ ಹೂಳು ಎತ್ತಲಾಯಿತು.

Advertisement

ರಸ್ತೆಯ ಬದಿಯಲ್ಲಿ ಬೆಳೆದು ನಿಂತು ಸಂಚಾರಕ್ಕೆ ತೊಂದರೆ ಆಗುತ್ತಿದ್ದ ಮರದ ರಂಬೆ ಕೊಂಬೆ ಹಾಗೂ ಪೊದೆ ಗಿಡಗಂಟಿಗಳನ್ನು ಶ್ರಮದಾನ ಮಾಡುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿ ಕೊಡಲಾಯಿತು. ಗ್ರಾಮ ಪಂಚಾಯತ್‌ ಸದಸ್ಯ ರವೀಂದ್ರ ದೇವಾಡಿಗ, ಮಾಜಿ ಸದಸ್ಯ ದಿನೇಶ್‌ ರಾವ್‌, ಗ್ರಾಮದ ಹಿರಿಯರಾದ ಗೋಕುಲ್‌ದಾಸ್‌ ಕಾಮತ್‌, ಅರುಣ್‌ ಡಿ’ಸೋಜಾ, ಸಂತೋಷ್‌ ಶೆಟ್ಟಿ, ಪ್ರದೀಪ್‌ ಆಚಾರ್ಯ, ಅಂಗರಗುಡ್ಡೆ ರಾಮ ಭಜನ ಮಂದಿರದ ಅಧ್ಯಕ್ಷ ಜೀವನ್‌ ಶೆಟ್ಟಿ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next