Advertisement

ಮಂಗಳೂರಲ್ಲಿ ಸೋಲಾರ್‌ ಪಾರ್ಕ್‌: ಸಿಎಂ ಸಮ್ಮುಖ 52 ಸಾವಿರ ಕೋ.ರೂ. ಒಪ್ಪಂದಕ್ಕೆ ಸಹಿ

02:20 AM Jun 07, 2022 | Team Udayavani |

ಬೆಂಗಳೂರು: ಮಂಗಳೂರಿನಲ್ಲಿ ಹೈಡ್ರೋಜನ್‌ ಮತ್ತು ಅಮೋನಿಯಾ ಘಟಕ, ಪೂರಕವಾಗಿ ಸೋಲಾರ್‌ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ಗುರುಗ್ರಾಮ ಮೂಲದ ಆಕೆ¾ ಕ್ಲೀನ್‌ ಟೆಕ್‌ ಸೊಲ್ಯುಷನ್ಸ್‌ ಕಂಪೆನಿಯು ರಾಜ್ಯ ಸರಕಾರದೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖ ದಲ್ಲಿ ಸೋಮವಾರ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

Advertisement

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ| ಇ.ವಿ. ರಮಣ ರೆಡ್ಡಿ ಮತ್ತು ಆಕೆ¾ ಗ್ರೂಪ್‌ ಕಂಪೆನಿಯ ಸಿಒಒ ಸಂದೀಪ್‌ ಕಶ್ಯಪ್‌ ಅವರು ಒಪ್ಪಂದಕ್ಕೆ ಸಹಿ ಮಾಡಿದರು.

ಕರ್ನಾಟಕವು ನವೀಕರಿಸ ಬಹು ದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರಕಾರವು ಹಸುರು ಜಲಜನಕ ನೀತಿ ಯನ್ನು ರೂಪಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳುವಂತೆ ಆಕೆ¾ ಗ್ರೂಪ್‌ನವರಿಗೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯವು ಸದಾ ಹೊಸ ತಂತ್ರಜ್ಞಾನ, ಭವಿಷ್ಯದ ಯೋಜನೆಗಳಿಗೆ ಉತ್ತೇಜನ ನೀಡುತ್ತ ಬಂದಿದೆ. ಈ ಯೋಜನೆ ಅನುಷ್ಠಾನಕ್ಕೆ ಸರಕಾರ ತ್ವರಿತವಾಗಿ ಎಲ್ಲ ಅಗತ್ಯ ಬೆಂಬಲ ನೀಡಲಿದೆ. ನೀವು ಕೂಡ ಸಕಾಲದಲ್ಲಿ ಯೋಜನೆ ಜಾರಿಗೊಳಿಸಿ ಎಂದರು.

ಆಕೆ¾ ಗ್ರೂಪ್‌ ಜಾಗತಿಕ ಮಟ್ಟದಲ್ಲಿ ಹೈಡ್ರೋಜನ್‌ -ಅಮೋನಿಯ ಘಟಕ ಗಳ ಸ್ಥಾಪನೆಯಲ್ಲಿ ಮುಂಚೂಣಿ ಯಲ್ಲಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ವಿಶ್ವದ ಮೊದಲ ಹೈಡ್ರೋಜನ್‌ ಅಮೋನಿಯ, ಸೋಲಾರ್‌ ಘಟಕ ವನ್ನು ಸ್ಥಾಪಿಸಿದ್ದು, ಕಾರ್ಯಾರಂಭ ಮಾಡಿದೆ ಎಂದು ಆಕೆ¾ ಗ್ರೂಪ್‌ನ ಉಪಾಧ್ಯಕ್ಷ ಶಶಿ ಶೇಖರ್‌ ತಿಳಿಸಿದರು.
ಇಂಧನ ಸಚಿವ ವಿ. ಸುನಿಲ್‌ ಕುಮಾರ್‌, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್‌ ಕೃಷ್ಣ, ಆಕೆ¾ ಗ್ರೂಪ್‌ನ ಅಧಿಕಾರಿಗಳಾದ ಎಂ.ವಿ.ವಿ.ಎಸ್‌. ರೆಡ್ಡಿ, ಅರುಣ್‌ ಚೋಪ್ರಾ ಉಪಸ್ಥಿತರಿದ್ದರು.

Advertisement

ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ತಾಣ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಕಳೆದ ಮೂರು ತ್ತೈಮಾಸಿಕ ಅವಧಿಯಲ್ಲಿ ಕರ್ನಾಟಕಕ್ಕೆ ಹರಿದುಬಂದಿರುವ ಎಫ್ಡಿಐ ಮೊತ್ತವೇ ಇದಕ್ಕೆ ಸಾಕ್ಷಿ.
– ಬಸವರಾಜ್‌ ಬೊಮ್ಮಾಯಿ,
ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next