Advertisement

ಕೋಮು ಕಲಹದ ರಾಜಕೀಯಕ್ಕೆ ಸಣ್ಣ ಉದ್ಯಮಿಗಳು ಬಲಿಪಶು: ಕಾಂಗ್ರೆಸ್‌

08:43 PM Aug 23, 2022 | Team Udayavani |

ಬೆಂಗಳೂರು: ಬಿಜೆಪಿಯ ಕೋಮು ಕಲಹದ ರಾಜಕೀಯಕ್ಕೆ ಹಾಗೂ ಸರ್ಕಾರದ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ವ್ಯಾಪಾರಿಗಳು, ಸಣ್ಣ ಉದ್ದಿಮೆಗಳು ಬಲಿ ಪಶುಗಳಾಗುತ್ತಿದ್ದಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

Advertisement

ರಾಜ್ಯದ ಆರ್ಥಿಕತೆ ಮುಳುಗುತ್ತಿದೆ. ಬಿಜೆಪಿಯ ದ್ವೇಷ ರಾಜಕೀಯದಿಂದ ರಾಜ್ಯದ ಅರ್ಥವ್ಯವಸ್ಥೆ ಮೇಲಿನ ದುಷ್ಪರಿಣಾಮವೇನು ಎನ್ನಲು ಶಿವಮೊಗ್ಗದ 300 ಕೋಟಿ ರೂ.ನಷ್ಟ ತಾಜಾ ಉದಾಹರಣೆ ಆಗಿದೆ ಎಂದು ಕುಟುಕಿದೆ.

ರಸ್ತೆ ಗುಂಡಿಗೆ ಬಲಿಯಾದ ಪ್ರಕರಣ ಉಲ್ಲೇಖಿಸಿ ಈ ಸಾವುಗಳನ್ನ ‘ರಸ್ತೆ ಗುಂಡಿಗೆ ಬಲಿ’ ಎನ್ನುವುದಕ್ಕಿಂತ ಬಿಜೆಪಿ ಫಾರ್‌ ಕರ್ನಾಟಕ ಸರ್ಕಾರದ 40 ಪರ್ಸೆಂಟ್‌ ಕಮಿಷನ್‌ಗೆ ಬಲಿ ಎನ್ನುವುದೇ ಸೂಕ್ತ. ಹಲವು ಸಾವುಗಳಾದರೂ ಎಚ್ಚರವಾಗದ ಸರ್ಕಾರದ ಭಂಡತನ ಅಕ್ಷಮ್ಯ. ಬಸವರಾಜ ಬೊಮ್ಮಾಯಿ ಅವರೇ, ಇವರಿಗೆ 25 ಲಕ್ಷ ಪರಿಹಾರ ನೀಡುವುದಿಲ್ಲವೇ? ಅಥವಾ ನಿಮ್ಮ ಕರುಣೆ ಕೇವಲ ಚಾರ್ಲಿಗೆ ಹಾಗೂ ನಿಮ್ಮ ಕಾರ್ಯಕರ್ತರಿಗೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದೆ.

ಬಿಜೆಪಿಯವರು ತಿನ್ನುವುದು 40 ಪರ್ಸೆಂಟ್‌ ಕಮಿಷನ್‌ ಹಣವಾಗಿರುವುದರಿಂದ ಬೇರೆಯವರು ಸಹಜ ಆಹಾರ ಸೇವಿಸಿದರೆ ಅವರಿಗದು ವಿಚಿತ್ರವೆನಿಸುತ್ತದೆ. ಬಿಜೆಪಿ ಪ್ರಕಾರ 40 ಪರ್ಸೆಂಟ್‌ ಹಣವನ್ನೇ ತಿನ್ನಬೇಕು, ಹಣವಲ್ಲದೆ ಬೇರೇನೇ ತಿಂದರೂ ತಪ್ಪು ಎಂದು ಲೇವಡಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next