Advertisement

Pakistan ಪೇಶಾವರದಲ್ಲಿ ಸಿಖ್ ವ್ಯಕ್ತಿಯ ಗುಂಡಿಕ್ಕಿ ಹತ್ಯೆ

03:24 PM Jun 25, 2023 | Team Udayavani |

ಪೇಶಾವರ : ಅಪರಿಚಿತ ಬಂದೂಕುಧಾರಿಗಳು ಸಿಖ್ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಪೊಲೀಸರು ಭಾನುವಾರ ಕೆಲವು ಶಂಕಿತರನ್ನು ಬಂಧಿಸಿದ್ದಾರೆ.

Advertisement

35 ವರ್ಷದ ಮನಮೋಹನ್ ಸಿಂಗ್ ಅವರು ಪೇಶಾವರದ ಉಪನಗರ ಪ್ರದೇಶವಾದ ರಶೀದ್ ಗರ್ಹಿಯಿಂದ ಪೇಶಾವರದ ಆಂತರಿಕ ನಗರ ಪ್ರದೇಶಕ್ಕೆ ಹೋಗುತ್ತಿದ್ದಾಗ ಯಕ್ಕಾ ಟೂಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಗುಲ್ದಾರ ಚೌಕ್ ಕಕ್ಷಾಲ್ ಬಳಿ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆದ ಉದ್ದೇಶಿತ ದಾಳಿಯ ಇತ್ತೀಚಿನ ಘಟನೆಯಾಗಿದೆ.ಸಿಂಗ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿಸಿದ್ದಾರೆ.

ಶುಕ್ರವಾರ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಸಿಖ್ ವ್ಯಾಪಾರಿ ತರ್ಲೋಕ್ ಸಿಂಗ್ ಮೇಲಿನ ಸಶಸ್ತ್ರ ದಾಳಿಯ ಕುರಿತು ಭಯೋತ್ಪಾದನಾ ನಿಗ್ರಹ ಇಲಾಖೆ (CTD) ತನಿಖೆ ನಡೆಸುತ್ತಿದೆ. 48 ಗಂಟೆಗಳ ಒಳಗೆ ಪೇಶಾವರದಲ್ಲಿ ಸಿಖ್ ಪುರುಷರ ಮೇಲೆ ನಡೆದ ಎರಡು ದಾಳಿಗಳು ಟಾರ್ಗೆಟ್ ಹತ್ಯೆಯಾಗಿರಬಹುದು ಆದರೆ ಸಂಪೂರ್ಣ ತನಿಖೆಯ ನಂತರ ನಿಜವಾದ ಸಂಗತಿಗಳು ಬರಲಿವೆ ಎಂದು ಪೊಲೀಸರು ನಂಬಿದ್ದಾರೆ.

ಮಾರ್ಚ್‌ನಲ್ಲಿ ಸಿಖ್ ಉದ್ಯಮಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ನಗರದಲ್ಲಿ ಗುಂಡಿಕ್ಕಿ ಕೊಂದಿದ್ದರು.ಸುಮಾರು 15,000 ಸಿಖ್ಖರು ಪೇಶಾವರದಲ್ಲಿ ವಾಸಿಸುತ್ತಿದ್ದಾರೆ, ಹೆಚ್ಚಾಗಿ ಪ್ರಾಂತೀಯ ರಾಜಧಾನಿ ಪೇಶಾವರದ ಜೋಗನ್ ಶಾ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ.ಪೇಶಾವರದಲ್ಲಿ ಸಿಖ್ ಸಮುದಾಯದ ಹೆಚ್ಚಿನ ಸದಸ್ಯರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರೆ, ಕೆಲವರು ಔಷಧಾಲಯಗಳನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next