Advertisement

ಸಿದ್ದಾಪುರ ಪರಿಸರದಲ್ಲಿ ಸಿಡಿಲಿನಿಂದ ಅಪಾರ ನಷ್ಟ

11:15 AM Apr 12, 2022 | Team Udayavani |

ಸಿದ್ದಾಪುರ: ಪಶ್ಚಿಮಘಟ್ಟದ ತಪ್ಪಲಿನಲ್ಲಿ ರವಿವಾರ ರಾತ್ರಿ ಸುರಿದ ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ ಅಪಾರ ನಷ್ಟ ಸಂಭವಿಸಿದೆ. ಸಿದ್ದಾಪುರ ಗ್ರಾಮದ ಶ್ರೀ ಮಹಾಲಿಂಗೇಶ್ವರ ಸಮೀಪದ ಶಿವರಾಮ ರಾವ್‌ ಅವರ ಮನೆಗೆ ಸಿಡಿಲು ಹೊಡೆದ ಪರಿಣಾಮ ಮನೆಯ ಮೀಟರ್‌ ಬೋರ್ಡ್‌, ವಯರಿಂಗ್‌, ಸ್ವಿಚ್‌ ಬೋರ್ಡ್‌ ಹಾಗೂ ಗೋಡೆಗಳಿಗೆ ಹಾನಿ ಸಂಭವಿಸಿದೆ. ಮನೆಯವರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಅಂದಾಜು 50 ಸಾವಿರ ರೂ. ನಷ್ಟ ಸಂಭವಿಸಿದೆ.

Advertisement

ಹೊಸಂಗಡಿಯಲ್ಲಿ ನಷ್ಟ

ಹೊಸಂಗಡಿ ಗ್ರಾಮದ ಮಾವಿನಮನೆ ಗೌರಿ ಕುಲಾಲ ಅವರ ಮನೆಯ ಅಡಿಕೆ ತೋಟಕ್ಕೆ ಸಿಡಿಲು ಬಡಿದು, ಸುಮಾರು 30ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದಿವೆ. ಘಟನ ಸ್ಥಳಕ್ಕೆ ಗ್ರಾಮ ಲೆಕ್ಕಿಗ ಚಂದ್ರಶೇಖರ ಮೂರ್ತಿ , ಗ್ರಾಮ ಸಹಾಯಕ ವಿಠೊಬಾ ಮಲ್ಯ ಅವರು ಭೇಟಿ ನೀಡಿ ಪರಿಶಿಲನೆ ನಡೆಸಿದರು.

ಅಂಪಾರುನಲ್ಲಿ ನಷ್ಟ

ಅಂಪಾರು ಗ್ರಾಮದ ಮೂಡುಬಗೆ ಗೋಪಾಲಕೃಷ್ಣ ಕಿಣಿ ಅಂಪಾರು ಅವರ ಮನೆ ಹಾಗೂ ಅಡಿಕೆ ತೋಟವು ಗಾಳಿಗೆ ಹಾನಿ ಸಂಭವಿಸಿದೆ. ಕಾವೇರಿ ಪ್ರಸಾದ್‌ ಕೋಟೆಬೆಟ್ಟು ಅವರ ಮನೆ ಗಾಳಿಗೆ ಹಾನಿ ಸಂಭವಿಸಿದೆ. ಮೂಡುಬಗೆ ಮಂಜುನಾಥ ಕುಲಾಲ ಅವರ ಮನೆಗೆ ಸಿಡಿಲು ಬಡಿದು ಹಾನಿಗೊಂಡು ನಷ್ಟ ಸಂಭವಿಸಿದೆ. ಮೂಡುಬಗೆ ವಿವೇಕ ನಗರದ ಬನಶಂಕರಿ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಶಂಕರನಾರಾಯಣ ಗ್ರಾಮದ ಮೂಡುಬೈಲೂರು ಇಂದಿರ ಶೆಟ್ಟಿ ಅವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಯಾರಿಗೂ ಕೂಡ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next