Advertisement

ಸಿಯಾಚಿನ್‌ ವೀರ ಕೊಪ್ಪದಗೆ ಸೇನಾ ಪದಕ

03:45 AM Jan 16, 2017 | |

ಹೊಸದಿಲ್ಲಿ: ಸಿಯಾಚಿನ್‌ ಯುದ್ಧಭೂಮಿಯಲ್ಲಿ ವೀರಮರಣ ಅಪ್ಪಿದ ಕನ್ನಡಿಗ ವೀರಯೋಧ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಕೊಪ್ಪದ ಅವರನ್ನು ರವಿ ವಾರ ಮರಣೋತ್ತರ “ಸೇನಾ ಪದಕ’ ನೀಡಿ ಗೌರವಿಸಲಾಯಿತು.

Advertisement

ದಿಲ್ಲಿಯಲ್ಲಿ ನಡೆದ ಸೇನಾ ದಿನಾ ಚರಣೆಯಲ್ಲಿ ದಿ| ಹನುಮಂತಪ್ಪ ಪತ್ನಿ ಮಹಾದೇವಿ ಕೊಪ್ಪದ ಅವರನ್ನು  ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಅವರು ಸೇನಾ ಪದಕ ನೀಡಿ ಗೌರವಿಸಿದರು. 15 ಮಂದಿ ಇತರ ವೀರ ಯೋಧರನ್ನೂ ಸೇನಾ ಪದಕ ನೀಡಿ ಗೌರವಿಸಲಾಯಿತು.

ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಹಿಮಕುಸಿತ ಸಂಭವಿಸಿದಾಗ ಬರೋಬ್ಬರಿ 35 ಅಡಿ ಯಷ್ಟು ಹಿಮದ ಕೆಳಗೆ ಆರು ದಿನಗಳ ಕಾಲ ಜೀವ ಉಳಿಸಿಕೊಂಡಿದ್ದರು. ಆದರೆ ಅನಂತರ ದಿಲ್ಲಿಯ ಆರ್‌ಆರ್‌ ಆಸ್ಪತ್ರೆಯಲ್ಲಿ  ಚಿಕಿತ್ಸೆ ಫ‌ಲಕಾರಿಯಾಗದೆ ಹನುಮಂತಪ್ಪ ಕೊಪ್ಪದ್‌ ವಿಧಿವಶರಾಗಿದ್ದರು. ಅವರ ಶೂರತ್ವ, ಇಚ್ಛಾಶಕ್ತಿ ಬಗ್ಗೆ ದೇಶ ಹೆಮ್ಮೆ ಪಟ್ಟುಕೊಂಡಿತ್ತು.

ಕೊಪ್ಪದ ಅವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದವರು.

Advertisement

Udayavani is now on Telegram. Click here to join our channel and stay updated with the latest news.

Next