Advertisement

ಕಾಶ್ಮೀರದ ಪೂರ್ವಜರ ಗ್ರಾಮದಲ್ಲಿ ಹತ ಸಂಪಾದಕ ಬುಖಾರಿ ಅಂತ್ಯಕ್ರಿಯೆ

12:19 PM Jun 15, 2018 | Team Udayavani |

ಖೀರಿ, ಜಮ್ಮು ಕಾಶ್ಮೀರ : ಉಗ್ರರಿಂದ ನಿನ್ನೆ ಹತರಾಗಿದ್ದ ರೈಸಿಂಗ್‌ ಕಾಶ್ಮೀರ್‌ ಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್‌ ಬುಖಾರಿ ಅವರ ಅಂತ್ಯಕ್ರಿಯೆ ಇಂದು ಶುಕ್ರವಾರ ಬೆಳಗ್ಗೆ  ಅವರ ಪೂರ್ವಜರ ಗ್ರಾಮದಲ್ಲಿ ನಡೆಯಿತು. 

Advertisement

ಶುಜಾತ್‌ ಅವರು ಸ್ನೇಹಿತರು, ಬಂಧುಗಳು, ಅಭಿಮಾನಿಗಳು, ಹಿತೈಷಿಗಳು ಸುರಿಯುವ ಮಳೆಯನ್ನು ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ  ಶವ ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರದ್ಧಾಂಜಲಿ ಅರ್ಪಿಸಿದರು. ಬಾರಾಮುಲ್ಲಾ ಜಿಲ್ಲೆಯ ಪುಟ್ಟ ಗ್ರಾಮವಾಗಿರುವ ಇಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿರುವುದು ಇದೇ ಮೊದಲು ಎನ್ನಲಾಗಿದೆ.

ರಾಜ್ಯದ ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲ , ಪಿಡಿಪಿ ಹಾಗೂ ಬಿಜೆಪಿಯ ಸಚಿವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಭಾರೀ ಸಂಖ್ಯೆಯ ಜನರ ಜಮಾವಣೆಯಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next