Advertisement

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯ ದೀಪಪ್ರದಾನ ಕಾರ್ಯಕ್ರಮ

12:52 PM Mar 12, 2019 | Team Udayavani |

ಪುಣೆ: ಶ್ರೀ ರಾಮ ಪ್ರೌಢಶಾಲೆ ಕಲ್ಲಡ್ಕ 10ನೇ ತರಗತಿಯವರ ದೀಪ ಪ್ರದಾನ ಕಾರ್ಯಕ್ರಮವು ಮಾ.5ರಂದು ವೇದವ್ಯಾಸ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುಣೆಯ ಬಂಟರ  ಸಂಘದ ಅಧ್ಯಕ್ಷರಾದ  ಸಂತೋಷ್‌ ಶೆಟ್ಟಿ ಇನ್ನಕುರ್ಕಿಲ್‌ಬೆಟ್ಟು ಉಪಸ್ಥಿತರಿದ್ದು, ಮಾತನಾಡಿ, ಜ್ಞಾನದ ಪರೀಕ್ಷೆಯಲ್ಲಿ ಜಯಶಾಲಿಯಾಗುವುದು ಮಾತ್ರ ಸಾಧನೆಯಲ್ಲ, ಜೀವನದ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದು ನಿಜವಾದ ಸಾಧನೆ. ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಲಿತ ಮಕ್ಕಳು ತಮ್ಮ ಜೀವನದ ಯಾವುದೇ ಸಂದರ್ಭದಲ್ಲಿ ಬದುಕುವ ಸಾಮರ್ಥ್ಯವನ್ನು ಪಡೆದಿರುತ್ತಾರೆ ಎಂಬುದಕ್ಕೆ ಇಲ್ಲಿನ ಮಕ್ಕಳ ಕಾರ್ಯ

Advertisement

ಚಟುವಟಿಕೆ ಸಂಸ್ಕಾರಯುತ ನಡವಳಿಕೆಯಿಂದ ಅರಿವಾಗುತ್ತದೆ. ಇಂಗ್ಲಿಷ್‌ಮಯವಾದ ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆ ಅಗಾಧ ಸಂಖ್ಯೆಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಾ ರಾಷ್ಟ್ರದಾದ್ಯಂತ ಹೆಸರು ಮಾಡಿರುವುದು ಅದ್ಭುತವಾದುದು. ಶಾಲಾ ಮಕ್ಕಳನ್ನು ಬೀಳ್ಕೊಡುವ ಕಾರ್ಯಕ್ರಮವನ್ನು ದೀಪಪ್ರದಾನ ಎಂಬ ನಾಮಾಂಕಿತದೊಂದಿಗೆ ಅರ್ಥಪೂರ್ಣವಾದ ಪರಿಕಲ್ಪನೆ ಅದ್ಭುತ ವಾದುದು ಎಂದರು.

ಹಿಂದೂ ಸ್ವಾರ್ಥಿಯಲ್ಲ ಇನ್ನೊಬ್ಬರ ಏಳಿಗೆಯಲ್ಲಿ ಬಯಸುವವನು, ಭಾರತ ಭೂಮಿಯ ಮಣ್ಣಿನಗುಣ ಭಾರತೀಯರಲ್ಲಿ ಸಂಸ್ಕಾರ, ಸಂಸ್ಕೃತಿ, ದೇಶಪ್ರೇಮ, ಆಂತರ್ಯದÇÉೆ ಅಡಗಿರಲು ಕಾರಣವಾಗಿದೆ. ತಾನು ಬೆಳಗಿದ ದೀಪವನ್ನು ಇನ್ನೊಬ್ಬರು ಬೆಳಗಿಸಿ ನಂದಾ ದೀಪವಾಗುವ ಸಂಕೇತವೇ ದೀಪಪ್ರದಾನ ಕಾರ್ಯಕ್ರಮ. ಈ ಉದ್ದೇಶ ಸಫಲವಾಗಬೇಕಾದರೆ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಭಾರತ ಕಂಡ ಮಹಾಪುರುಷರ ಸಾಲಿಗೆ ಸೇರಬೇಕು ಎಂದು ಪುತ್ತೂರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್‌ ಇವರು ವಿದ್ಯಾರ್ಥಿಗಳಿಗೆ ಶುಭಾಶೀರ್ವಾದ ನೀಡಿದರು.

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಸ್ಕಾರಯುತ ಶಿಕ್ಷಣ ಕಲಿತ ವಿದ್ಯಾರ್ಥಿಗಳ ಮುಂದೆ 
ಮಹಾನ್‌ ವ್ಯಕ್ತಿಗಳಾವುದು ಸತ್ಯ ಎಂದು ದಾವಣಗೆರೆಯ ಹೋಟೆಲ್‌ ಮಾಲಕರ ಸಂಘದ ಅಧ್ಯಕ್ಷರಾದ ಪರಮೇಶ್ವರ್‌ ಅವರು  ಹರ್ಷ ವ್ಯಕ್ತಪಡಿಸಿದರು.
ಪ್ರೌಢ ವಯಸ್ಸಿನವರೆಗೆ ಕಲಿತ ಸಂಸ್ಕಾರಯುತ ಶಿಕ್ಷಣ, ಮೌಲ್ಯಗಳು ಗುರುವಂದನೆ 
ಮುಂದೊಂದು ದಿನ ಉತ್ತಮ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇಂತಹ ಶಿಕ್ಷಣ ಶ್ರೀರಾಮ ವಿದ್ಯಾಸಂಸ್ಥೆ ನೀಡುತ್ತದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ಬೆಳಗಬೇಕು ಎಂದು ಬಂಟ್ವಾಳ ರೋಟರಿ ಕ್ಲಬ್‌ ಉಪಾಧ್ಯಕ್ಷರಾದ  ಪಲ್ಲವಿ ಕಾರಂತ್‌ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಭಾರತಮಾತೆಗೆ ಅರ್ಚನೆಗೈದು ಹಿರಿಯರಿಂದ ತಿಲಕಧಾರಣೆ ಹಾಗೂ ಆಶೀರ್ವಾದ ಪಡೆದರು. 10ನೇ ತರಗತಿ ವಿದ್ಯಾರ್ಥಿ ಪ್ರಮುಖರು, 9ನೇ ತರಗತಿ ವಿದ್ಯಾರ್ಥಿಗಳಿಗೆ   ದೀಪ ಪ್ರದಾನಗೈದರು. ಕಾರ್ಯಕ್ರಮದಲ್ಲಿ ಸಹಶಿಕ್ಷಕಿಯಾದ ವಿಜಯ ಸ್ವಾಗತಿಸಿ, 10ನೇ ತರಗತಿಯ ಶಮಿತಾ, ಪ್ರದೀಪ್‌,  ವೈಷ್ಣವಿ, ಭವ್ಯ, ಅರ್ಚನಾ ಅವರು  ಅನಿಸಿಕೆ ವ್ಯಕ್ತಪಡಿಸಿದರು. 8ನೇ ತರಗತಿಯ ಪ್ರಕೃತಿ ಅವರಿಂದ ಹಾಡುಗಾರಿಕೆ ನಡೆಯಿತು. ಹಿರಿಯ ಶಿಕ್ಷಕಿ ಶಾಂಭವಿ ವಂದಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸಹಶಿಕ್ಷಕರಾದ ಮನೋಜ್‌ ಅವರು ಅನುಗ್ರಹದ ಮಾತುಗಳನ್ನಾಡಿದರು. 9ನೇ ತರಗತಿಯ ಅನಘಾ ಕಾರ್ಯಕ್ರಮ ನಿರೂಪಿಸಿದಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next