Advertisement

ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಬೇಡ

05:57 PM May 20, 2020 | Suhan S |

ಜೋಯಿಡಾ: ತಾಲೂಕಿನ ಜನತೆ ದೇಶಕ್ಕೆ ಕೊಡುಗೆ ನೀಡಿದವರು. ಅವರಿಗೇ ಕುಡಿಯಲು ನೀರು ಕೊಡದ ನೀವು ಪಕ್ಕದ ಜಿಲ್ಲೆಗಳಿಗೆ ನೀರು ಕೊಡುವ ಮೂಲಕ ಮಾನವೀಯತೆ ಮರೆತಿರುವುದು ನಾಚಿಕೆಗೇಡಿನ ವಿಷಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಹೇಳಿದರು.

Advertisement

ತಾಲೂಕು ಕೇಂದ್ರದ ಪಾಲಿಟೆಕ್ನಿಕ್‌ ಕಾಲೇಜಿನ ಸಭಾಭವನದಲ್ಲಿ ತಾಲೂಕಿನ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರಿನ ವಿಷಯ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದರು. ಸೂಪಾ ಜಲಾಶಯಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಾರೆ. ಆದರೆ ಅವರ ಬದಕು ಇಂದಿಗೂ ಅತಂತ್ರವಾಗಿಯೇ ಇದೆ. ಇಂತಹ ತ್ಯಾಗ ಬದುಕಿಗೆ ಸರಕಾರದ ಸೌಲಭ್ಯ ಸಹಕಾರ ಪಡೆಯುವಲ್ಲಿ ತೊಂದರೆ ಕೊಡದಿರಿ. ಅರಣ್ಯ ವಾಸಿಗರಿಗೆ ಯಾವುದೇ ಕಿರುಕುಳ ನೀಡದೆ ತಾಲೂಕಿನ ಮುಗ್ಧ ಜನತೆಯ ಬದುಕಿಗೆ ಬೆಂಬಲಿಸಿ ಎಂದರು.

ಅರಣ್ಯ ಇಲಾಖೆ ಇನ್ನು ಮುಂದೆ ಯಾವುದೇ ಅಭಿವೃದ್ಧಿ ಕೆಲಸಕ್ಕೆ ತೊಂದರೆ ಕೊಡದೆ ಸರಾಗವಾಗಿ ನಡೆಯಲು ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಾಲೂಕಿನ ಜೋಯಿಡಾ ಕೇಂದ್ರ ಹಾಗೂ ರಾಮನಗರಗಳಿಗೆ ಕುಡಿಯುವ ನೀರಿನ ಸಮಸ್ಯೆಯಿದ್ದು, ಕೂಡಲೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ, ಜಿ.ಪಂ. ಸದಸ್ಯ ರಮೇಶ ನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ರೆಡ್ಕರ ಮಂಗೇಶ ದೇಶಪಾಂಡೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next