Advertisement

Shobha Karandlaje; ದುಷ್ಟ ಶಕ್ತಿಗಳು ಯಾರೆಂಬುದನ್ನು ಜನರೇ ತೀರ್ಮಾನಿಸುತ್ತಾರೆ

01:06 AM Oct 13, 2024 | Team Udayavani |

ಮೈಸೂರು: ದುಷ್ಟ ಶಕ್ತಿಗಳು ಯಾರು ಎಂಬುದನ್ನು ಸರಕಾರ ತೀರ್ಮಾನ ಮಾಡುವುದಿಲ್ಲ, ಬದಲಿಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಸರಕಾರದ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

Advertisement

ದುಷ್ಟ ಶಕ್ತಿಗಳ ಎದುರು ಸತ್ಯದ ಜಯ ಎಂಬ ಜಾಹೀರಾತು ಕುರಿತು ಪ್ರತಿಕ್ರಿಯಿಸಿ, ಯಾರು ಸರಕಾರದ ಹಣ, ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಯಾರು ಭಷ್ಟಾಚಾರವನ್ನು ಉದ್ಯಮ ಮಾಡಿಕೊಂಡಿ¨ªಾರೆ ಅವರು ಯಾವ ದುಷ್ಟರ ಬಗ್ಗೆ ಮಾತನಾಡ್ತಾರೆ? ಇದನ್ನು ಅವರಿಗೆ ಅವರೇ ಪ್ರಶ್ನಿಸಿಕೊಳ್ಳಬೇಕು. ಮುಡಾ ಹಗರಣದಲ್ಲಿ ಸಿಎಂ ಪತ್ನಿ ಸೈಟ್‌ ವಾಪಸ್‌ ಮಾಡಿದ್ದಾರೆ. ತಪ್ಪು ಮಾಡದೇ ಏಕೆ ವಾಪಸ್‌ ನೀಡಿದರು. ತಪ್ಪು ಮಾಡಿರುವುದಕ್ಕೆ ವಾಪಸ್‌ ನೀಡಿದ್ದೀರಿ. ವಾಲ್ಮೀಕಿ ನಿಗಮದಲ್ಲಿ ಹಗರಣದ ಬಗ್ಗೆ ಇ.ಡಿ. ವರದಿ ನೀಡಿದೆ ಎಂದು ದೂರಿದರು. ಪರಿಶಿಷ್ಟ ಪಂಗಡದ ಹಣವನ್ನ ಆಂಧ್ರ, ಬಳ್ಳಾರಿ ಚುನಾವಣೆಗೆ ನೀಡಿರುವ ವರದಿ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next