Advertisement

ಹೆದ್ದಾರಿ ಅಭಿವೃದ್ಧಿ ಕೋರಿ ಸಂಸದೆ ಶೋಭಾ ಮನವಿ

10:55 PM Jul 02, 2019 | Lakshmi GovindaRaj |

ಬೆಂಗಳೂರು: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ದೆಹಲಿಯಲ್ಲಿ ಭೇಟಿಯಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದರು.

Advertisement

ಕರಾವಳಿ ಬೈಪಾಸ್‌- ಮಲ್ಪೆ ರಸ್ತೆ ವಿಸ್ತರಣೆ, ಪರ್ಕಳದಿಂದ- ತೀರ್ಥಹಳ್ಳಿವರೆಗಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಬೇಲೂರು- ಚಿಕ್ಕಮಗಳೂರು ರಸ್ತೆ ಅಭಿವೃದ್ಧಿ, ಶೃಂಗೇರಿ- ಬಾಳೆಹೊನ್ನೂರು- ಆಲ್ದೂರು- ನಾಡಿಪುರ ರಸ್ತೆ ಅಭಿವೃದ್ಧಿ, ತೀರ್ಥಹಳ್ಳಿಯಿಂದ ನಿಮ್ಮಾರದವರೆಗಿನ ರಸ್ತೆ ಅಭಿವೃದ್ಧಿ,

ಬೇಲೂರು- ಚಿಕ್ಕಮಗಳೂರು (ಮೂಡಿಗೆರೆ- ಕಡೂರು ರಸ್ತೆ) ನಗರಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳ ಇತರೆ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಶೋಭಾ ಕರಂದ್ಲಾಜೆ ಮನವಿ ಪತ್ರದಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next