Advertisement

ಶಿವಳ್ಳಿ ಸಂಪದ ನೆಲ್ಯಾಡಿ ವಲಯ: ಪ್ರತಿಭಾ ಪುರಸ್ಕಾರ

02:25 AM Jul 03, 2018 | Team Udayavani |

ನೆಲ್ಯಾಡಿ: ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ಪ್ರತಿಭಾ ಪುರಸ್ಕಾರ ಮತ್ತು ಸಾಮಾನ್ಯ ಸಭೆ ಕೊಕ್ಕಡ ರಾಧಾಕೃಷ್ಣ ಯಡಪಡಿತ್ತಾಯರ ಮನೆಯಲ್ಲಿ ನೆರವೇರಿತು. ವಲಯದ ಅಧ್ಯಕ್ಷ ಎನ್‌.ವಿ. ವ್ಯಾಸರು ಸಭಾಧ್ಯಕ್ಷತೆ ವಹಿಸಿ ಬ್ರಾಹ್ಮಣರು ಸರಕಾರದಿಂದ ಸಿಗುವ ಕೃಷಿ ಸೌಲಭ್ಯಗಳ ಮಾಹಿತಿ ಪಡೆದುಕೊಂಡು ತಮ್ಮ ಕೃಷಿ ಭೂಮಿ ಉಳಿಸಿಕೊಂಡು ಅಭಿವೃದ್ಧಿಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಿವಳ್ಳಿ ಸಂಪದ ಪುತ್ತೂರು ಇದರ ಅಧ್ಯಕ್ಷ ಹರೀಶ್‌ ಪುತ್ತೂರಾಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬ್ರಾಹ್ಮಣ ಯುವಕ ಯುವತಿಯರ ಸುಂದರ ಭವಿಷ್ಯ ರೂಪಿಸಲು ಸಂಘಟನೆಯು ನೆರವಾಗುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

Advertisement

ನಿತ್ಯಶ್ರೀ ಇವರ ಪ್ರಾರ್ಥನೆಯ ಬಳಿಕ ಸರೋಜಕುಮಾರಿ ನೀತಿಸಂಹಿತೆ ಪಠಿಸಿದರು. ಆರ್‌. ವೆಂಕಟ್ರಮಣ ಅವರು ಅತಿಥಿಗಳನ್ನು ಪರಿಚಯಿಸಿದರು. ತಾ| ಅಧ್ಯಕ್ಷ ಹರೀಶ್‌ ಪುತ್ತೂರಾಯ, ವಲಯದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಯಡಪಡಿತ್ತಾಯ ಮತ್ತು ಆನಂದ ಉಡುಪರನ್ನು ರಾಮಕೃಷ್ಣ ಯಡಪಡಿತ್ತಾಯ, ರಾಜರಾಮ ಹೆಬ್ಟಾರ್‌, ಸತೀಶ್‌ ಮಡಂಬಡಿತ್ತಾಯ, ಸುಬ್ರಹ್ಮಣ್ಯ ಶಬರಾಯರು ಸನ್ಮಾನಿಸಿದರು. ಉದಯ ಕುಮಾರ್‌ ಆರ್ಥಿಕ ವರದಿ ಮಂಡಿಸಿದರು.

ವಲಯದಲ್ಲಿ ಅಂತಿಮ ವರ್ಷದ ಕಲಿಕೆಯಲ್ಲಿ ಡಿಸ್ಟಿಂಕ್ಷನ್‌ ಸಾಧಕರಾದ ನಿತ್ಯಶ್ರೀ ಹೆಬ್ಟಾರ್‌, ಭೂಮಿಕಾ ಸುಲ್ತಾಜೆ, ಅನಂತೇಶ ಕುಂಡಡ್ಕ, ಸಿದ್ಧಾರ್ಥ್ ಕಡಂಬಳಿತ್ತಾಯ, ಆದಿತ್ಯ ಹೆಬ್ಟಾರ್‌, ಆಕಾಶ್‌ ಜೋಗಿತ್ತಾಯ, ಅನುಷಾ ಸರಳಾಯ, ಅನುಷಾ ಪಾಂಗಣ್ಣಾಯ, ರೇಶ್ಮಾ ನೆಕ್ಕರ್ಲ ಅವರನ್ನು ನಗದು ಬಹುಮಾನ ನಿಡಿ ಸಮ್ಮಾನಿಸಲಾಯಿತು. ಮಹಿಳಾ ಸಂಪದದ ಅಧ್ಯಕ್ಷೆ ವನಿತಾ ಬಾಲಚಂದ್ರ, ಗುರುಪ್ರಸಾದ್‌ ಆಚಾರ್‌ ಉಪಸ್ಥಿತರಿದ್ದರು. ರವೀಂದ್ರ ಟಿ. ಕಾರ್ಯಕ್ರಮ ನಿರೂಪಿಸಿದರು. ದಿವಾಕರ ಹೆಬ್ಟಾರ್‌ ಮತ್ತು ಸುಬ್ರಹ್ಮಣ್ಯ ಶಬರಾಯ ಕಾರ್ಯಕ್ರಮ ಸಂಘಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next