Advertisement

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

12:41 AM Jul 03, 2024 | Team Udayavani |

ಬೈಂದೂರು: ಮಂಗಳವಾರ ಮುಂಜಾನೆ ಬೀಸಿದ ಭಾರೀ ಗಾಳಿ ಮಳೆಗೆ ಶಿರೂರು ಗಡಿ ಭಾಗದಲ್ಲಿರುವ ಹೊಟೇಲೊಂದರ ಮೇಲ್ಛಾವಣಿ ಹಾರಿ ಹೋಗಿದೆ. ಗಾಳಿಯ ಅಬ್ಬರಕ್ಕೆ ಹೊಟೇಲ್‌ ಸಂಪೂರ್ಣ ಹಾನಿಗೊಂಡಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

Advertisement

ಹಠಾತ್‌ ಬೀಸಿದ ಗಾಳಿ: ಮಂಗಳವಾರ ಬೆಳಗ್ಗೆ 9 ಗಂಟೆಗೆ ಒಮ್ಮೆಲೆ ಸುಂಟರಗಾಳಿ ಮೇಲೆದ್ದಿದೆ. ಸಹಜವಾಗಿ ಬಯಲು ಪ್ರದೇಶವಾದುದರಿಂದ ಹೆಚ್ಚಿಗೆ ಮನೆಗಳಿರಲಿಲ್ಲ. ಬೀಸಿದ ಗಾಳಿ ಹೆದ್ದಾರಿ ಸಮೀಪ ಇರುವ ಹೊಟೇಲ್‌ ಒಂದರ ಮೇಲ್ಛಾವಣಿಯನ್ನು ಹಾರಿಸಿಕೊಂಡು ಹೋಗಿದೆ. ಸ್ಟೀಲ್‌ ಶೀಟ್‌ಗಳು ಗೋಡೆಗೆ ಹಾಕಿದ ಮೊಳೆಗಳ ಸಹಿತ ಮೇಲೆದ್ದು ಕೆಳಗೆ ಬಿದ್ದಿದೆ.ಹೊಟೇಲ್‌ನ ಒಳಾಂಗಣ ಫ್ಯಾನ್‌ ಕಳಚಿ ಬಿದ್ದಿದೆ.

ತಪ್ಪಿದ ಬಾರಿ ಅನಾಹುತ: ಊಟದ ಹೊಟೇಲ್‌ ಆಗಿರುವ ಕಾರಣ ಬೆಳಗ್ಗೆ ಸಿಬಂದಿ ಹಾಗೂ ಗ್ರಾಹಕರು ಇರಲಿಲ್ಲ.ಹೀಗಾಗಿ ಯಾರಿಗೂ ಕೂಡ ಅಪಾಯವಾಗಿಲ್ಲ. ಶೀಟ್‌ಗಳು ವಿದ್ಯುತ್‌ ಲೈನ್‌ಗೆ ಬಡಿದ ಪರಿಣಾಮ ನಾಲ್ಕೈದು ಕಂಬಗಳಿಗೆ ಹಾನಿಯಾಗಿದೆ. ಈ ಸಮಯ ಹೆದ್ದಾರಿಯಲ್ಲಿ ವಾಹನ ಸಂಚಾರ ಕಡಿಮೆ ಇದ್ದರಿಂದ ಯಾವುದೇ ತೊಂದರೆ ಆಗಿಲ್ಲ. ಘಟನ ನಡೆದ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಶಿರೂರು ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್‌ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next