Advertisement

ಶಿರಾಡಿ ಹೆದ್ದಾರಿ: ತಾತ್ಕಾಲಿಕ ದುರಸ್ತಿ; ಸವಾರರ ಸಂಕಷ್ಟ

07:55 AM Aug 06, 2017 | |

ನೆಲ್ಯಾಡಿ: ಶಿರಾಡಿ ಹೆದ್ದಾರಿಯ ಬೃಹತ್‌ ಹೊಂಡಗಳಿಗೆ ಜಲ್ಲಿ ಹಾಕಿ ಮುಚ್ಚು ವುದರ ಮೂಲಕ ಕಳೆದ ಕೆಲವು ತಿಂಗಳಿಂದ ವಾಹನ ಸವಾರರು ಅನುಭವಿಸುತ್ತಿದ್ದ ಸಂಕಷ್ಟವು ತಾತ್ಕಾಲಿಕವಾಗಿ ಪರಿಹಾರವಾಗಿದೆ.

Advertisement

ವಾರದ ಹಿಂದೆ ಉದಯವಾಣಿ ಸುದಿನದಲ್ಲಿ  ಶಿರಾಡಿ ಹೆದ್ದಾರಿಯ ಸಮಸ್ಯೆ ಬಗ್ಗೆ ವರದಿ ಪ್ರಕಟಿಸಿತ್ತು. ಇದೀಗ ಹೆದ್ದಾರಿ ಯಲ್ಲಿನ ಹೊಂಡಗಳಿಗೆ ಜಲ್ಲಿಯನ್ನು ಹಾಕಿ ಮುಚ್ಚುವ ಹಾಗೂ ಕೆಲವು ಕಡೆ ಪ್ಯಾಚ್‌ ವರ್ಕ್‌ ನಡೆಸುವುದರ ಮೂಲಕ ಸಮಸ್ಯೆ ಬಗೆಹರಿದಿದೆ.
ಕಳೆದೊಂದು ವಾರದಿಂದ ಈ ಭಾಗ ದಲ್ಲಿ ನಿರಂತರ ಮಳೆಯಾಗತ್ತಿರುವುದರಿಂದ ಡಾಮರ್‌ ಬಳಸಿ ದುರಸ್ತಿ ನಡೆಸಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ಜಲ್ಲಿಯನ್ನು ಹೊಂಡಗಳಿಗೆ ತುಂಬಿಸು ವುದರ ಮೂಲಕ ಹೊಂಡಗಳಿಗೆ ಮುಕ್ತಿ ನೀಡಲಾಗಿದೆ. 

ಹೆದ್ದಾರಿಯ ದುಃಸ್ಥಿತಿಯ ಬಗ್ಗೆ ಮಲೆನಾಡು ಹಿತರಕ್ಷಣಾ ವೇದಿಕೆಯು ಸಂಬಂಧಪಟ್ಟ ಇಲಾಖೆಗೆ ಹಲವಾರು ಬಾರಿ ಮನವಿ ಮಾಡಿದರೂ ದುರಸ್ತಿಯಾಗಿರಲಿಲ್ಲ.  ಪ್ರತಿಭಟನೆ ನಡೆ ಸಲು ಸಿದ್ದವಾದ ಹಿನ್ನೆಲೆ ಯಲ್ಲಿ ಇದೀಗ ದುರಸ್ತಿ ಕಾರ್ಯ ನಡೆದು ವಾಹನ ಸವಾರರು ತಾತ್ಕಾಲಿಕವಾಗಿ ಯಾದರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next