Advertisement

ಶಿರಾಡಿಘಾಟಿ ರಸ್ತೆ: ಕಳಪೆ ಕಾಮಗಾರಿ ಆರೋಪ 

06:10 AM Sep 30, 2018 | Team Udayavani |

ಬೆಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿಘಾಟಿ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ನೀತಿ ಸಂಸ್ಥೆ ಆರೋಪಿಸಿದೆ. 

Advertisement

ಸುದ್ದಿಗೋಷ್ಠಿಯಲ್ಲಿ ನೀತಿ ಸಂಸ್ಥೆ ಅಧ್ಯಕ್ಷ ಟಿ.ಜಯಂತ್‌ ಮಾತನಾಡಿ, ಘಾಟಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಉಂಟಾಗುವ ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರ್ಷದ ಹಿಂದೆ ಹಾಸನದ ಮಾರನಹಳ್ಳಿಯಿಂದ ಕೆಂಪು ಹೊಳೆಯವರೆಗೆ 15 ಕಿ.ಮೀ.ವರೆಗೆ ಸಿಮೆಂಟ್‌ ರಸ್ತೆ ನಿರ್ಮಿಸಿತ್ತು. ಇದರ ಉಳಿದ 13 ಕಿ.ಮೀ. ರಸ್ತೆಯನ್ನು 86 ಕೋಟಿ ರೂ.ಗಳಲ್ಲಿ ಓಷನ್‌ ಕನ್‌ಸ್ಟ್ರಕ್ಷನ್‌ ಕಂಪನಿ ನಿರ್ಮಿಸಿರುತ್ತದೆ. ಇದರ ಯೋಜನಾ ನಕ್ಷೆ ಮತ್ತು ಕಾಮಗಾರಿ ನಡೆಸಿದ ರಸ್ತೆಯನ್ನು ಪರಿಶೀಲಿಸಿದಾಗ ಕಳಪೆಯಾಗಿದೆ ಎಂದು ತಿಳಿದು ಬಂದಿದೆ ಎಂದು ದೂರಿದರು. 

ಜು.15ರಂದು ಸರ್ಕಾರ ಈ 13 ಕಿ.ಮೀ. ರಸ್ತೆಯನ್ನು ಲೋಕಾರ್ಪಣೆಗೊಳಿಸಿದೆ. ಆದರೆ,ಇದಾಗಿ 15 ದಿನಗಳಲ್ಲೆ ರಸ್ತೆ ಬದಿಯಲ್ಲಿ ಸಿಮೆಂಟ್‌,ಕಬ್ಬಿಣದಿಂದ ನಿರ್ಮಿಸಲಾಗಿರುವ ತಡೆಗೋಡೆಗಳು 10 ಕಡೆಗಳಲ್ಲಿ ಮುರಿದು ಬಿದ್ದು ರಸ್ತೆ ಬಿರುಕುಗೊಂಡಿರುತ್ತದೆ.ಇದನ್ನು ಪ್ರಕೃತಿ ವಿಕೋಪವೆಂದು ಬಿಂಬಿಸಿ ಮುರಿದು ಬಿದ್ದಿರುವ ತಡೆಗೋಡೆ ಮತ್ತು ರಸ್ತೆ ನಿರ್ಮಾಣಕ್ಕಾಗಿ 60 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಧಿಕಾರಿಗಳು ವರದಿ ತಯಾರಿಸಿ ಹಣ ಲೂಟಿ ಮಾಡಲು ಮುಂದಾಗಿದ್ದಾರೆಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next