Advertisement

ಪ್ರಾಯಶಃ ಎಂಬ ಕಿಲ್ಲಿಂಗ್ ಸ್ಟೋರಿ: ಕೃಷ್ಣಾ ಭಟ್, ಶೈನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ

07:58 AM Jul 09, 2021 | Team Udayavani |

ಸುಮಾರು ಎರಡು ವರ್ಷಗಳ ಹಿಂದೆ “ಸವರ್ಣ ದೀರ್ಘ‌ ಸಂಧಿ’ ಎಂಬ ಚಿತ್ರದ ಮೂಲಕ ಹಿರಿಯ ನಟಿ ವಿನಯಾ ಪ್ರಸಾದ್‌ ಅವರ ಅಣ್ಣನ ಮಗಳು ಕೃಷ್ಣಾ ಭಟ್‌, ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾಗಿದ್ದು ನಿಮಗೆ ಗೊತ್ತಿರಬಹುದು. ಆ ಚಿತ್ರದ ಬಳಿಕ ಇದೀಗ ಕೃಷ್ಣಾ ಭಟ್‌ “ಪ್ರಾಯಶಃ’ ಎಂಬ ಮತ್ತೂಂದು ಚಿತ್ರದ ಮೂಲಕ ಸಿನಿಪ್ರಿಯರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

Advertisement

ಅಂದಹಾಗೆ, “ಪ್ರಾಯಶಃ’ ಹೆಸರೇ ಹೇಳುವಂತೆ ಒಂದು ಸಸ್ಪೆನ್ಸ್‌-ಥ್ರಿಲ್ಲರ್‌, ಮರ್ಡರ್‌ ಮಿಸ್ಟ್ರಿ ಕಥಾಹಂದರ ಹೊಂದಿರುವ ಸಿನಿಮಾ. ಯುವ ನಿರ್ದೇಶಕ ರಂಜಿತ್‌ ರಾವ್‌ ಈ ಚಿತ್ರಕ್ಕೆ ಕಥೆ, ಚಿತ್ರ ಬರೆದು ನಿರ್ದೇಶಿಸಿದ್ದಾರೆ. “ಅರ್ಹ ಕ್ರಿಯೇಷನ್ಸ್‌’ ಬ್ಯಾನರ್‌ನಡಿ ಈ ಚಿತ್ರದ ನಿರ್ಮಾಣ ಕೂಡ ಮಾಡಿದ್ದಾರೆ.

ತಮ್ಮ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್‌ ರಾವ್‌, “ನಾವು ಏನು ನೋಡುತ್ತೇವೋ? ಅದು ಆ ಕ್ಷಣದ ಸತ್ಯ ಮಾತ್ರ. ಈ ವಿಷಯವನ್ನಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಚಿತ್ರದ ಕಥೆಯಲ್ಲೊಂದು ಕೊಲೆ ನಡೆಯುತ್ತದೆ. ಆ ಕೊಲೆಯ ಸುತ್ತ ಏನೆಲ್ಲ ಆಗುತ್ತದೆ ಎಂಬುದರ ಸುತ್ತ ಇಡೀ ಚಿತ್ರ ಸಾಗುತ್ತದೆ. ಇದೊಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ’ ಎನ್ನುತ್ತಾರೆ.

ಇನ್ನು “ಪ್ರಾಯಶಃ’ ಚಿತ್ರದಲ್ಲಿ ಕೃಷ್ಣಾ ಅವರೊಂದಿಗೆ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಶೈನ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೈನ್‌ ಶೆಟ್ಟಿ ಚಿತ್ರದಲ್ಲಿ ತೆರೆಮೇಲೆ ಚಿತ್ರ ನಿರ್ದೇಶಕನ ಪಾತ್ರ ಮಾಡಿದ್ದು, ಈ ಕಥೆಯ ನಿರೂಪಣೆ ಮಾಡುತ್ತಾರಂತೆ

Advertisement

Udayavani is now on Telegram. Click here to join our channel and stay updated with the latest news.

Next