Advertisement

ಸಿಎಂ ತವರು ಶಿವಮೊಗ್ಗದಲ್ಲೇ ಬಿಜೆಪಿಗೆ ಮುಖಭಂಗ: ಎಪಿಎಂಸಿಯಲ್ಲಿ ಅಧಿಕಾರ ಹಿಡಿದ ಜೆಡಿಎಸ್

03:56 PM Jul 01, 2020 | keerthan |

ಶಿವಮೊಗ್ಗ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿಗೆ ಮುಖಭಂಗ ಉಂಟಾಗಿದೆ. ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

Advertisement

ಎಪಿಎಂಸಿಯಲ್ಲಿ ಜೆಡಿಎಸ್ 8 ಸದಸ್ಯ ಬಲ ಹೊಂದಿತ್ತು. ಬಿಜೆಪಿ 9 ಸದಸ್ಯ ಬಲ ಹೊಂದಿತ್ತು.  ಎಪಿಎಂಸಿಯಲ್ಲಿ ಬಹುಮತ ಹೊಂದಿದ್ದರೂ ಬಿಜೆಪಿಗೆ ಅಧಿಕಾರ ತಪ್ಪಿತು. ಬಿಜೆಪಿ ಸದಸ್ಯನೋರ್ವ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾವಣೆ ಮಾಡಿದ್ದರಿಂದ ಬಿಜೆಪಿಗೆ ಅಧಿಕಾರ ವಂಚಿತವಾಗಿದೆ.

ಈ ಬಾರಿ ಎಪಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಮೂವರನ್ನು ಎಪಿಎಂಸಿಗೆ ನಾಮನಿರ್ದೇಶನ ಮಾಡಿ ಬಿಜೆಪಿ ತನ್ನ ನಿರ್ದೇಶಕರ ಸಂಖ್ಯೆಯನ್ನು 9 ಕ್ಕೆ ಏರಿಸಿಕೊಂಡಿದ್ದರು.

ಬಿಜೆಪಿ ಸದಸ್ಯನೋರ್ವ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾವಣೆ ಮಾಡಿದ್ದರಿಂದ ಚುನಾವಣೆಯಲ್ಲಿ ಜೆಡಿಎಸ್ ನ ದುಗ್ಗಪ್ಪ ಗೌಡ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜೆಡಿಎಸ್‌ನ ಬಾಬಣ್ಣ ಆಯ್ಕೆಯಾದರು.

ಎಪಿಎಂಸಿ ಅಧ್ಯಕ್ಷ‌ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಅನುಭವಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next