Advertisement

ಶಿವಮೊಗ್ಗ: ಬೆಲೆ ಏರಿಕೆ ಖಂಡಿಸಿ ಬೂತ್‌ನ ಅಧ್ಯಕ್ಷ ಶೇಖರ್‌ ರಾಜೀನಾಮೆ

02:59 PM Aug 25, 2021 | Shreeram Nayak |

ಶಿವಮೊಗ್ಗ: ಬೆಲೆ ಏರಿಕೆ ಖಂಡಿಸಿ ಅಶೋಕ ನಗರ ವಾರ್ಡ್‌ ವ್ಯಾಪ್ತಿಗೆ ಬರುವ ಬಿಜೆಪಿ ಬೂತ್‌ನ ಅಧ್ಯಕ್ಷ ಶೇಖರ್‌ ಅವರು ನಾಮಫ‌ಲಕ ತಿರಸ್ಕರಿಸಿ ಸ್ಥಳದಲ್ಲೇ ರಾಜೀನಾಮೆ ನೋಡಿದ ಘಟನೆ ಬುಧವಾರ ನಡೆದಿದೆ.

Advertisement

ಇಂದು ಬೆಳಿಗ್ಗೆ 26ನೇ ವಾರ್ಡ್‌ನ 199ನೇ ಬೂತ್‌ ಅಧ್ಯಕ್ಷರಾಗಿರುವ ಶೇಖರ್‌ ಅವರು ಆ ವಾರ್ಡ್‌ನ ಅಧ್ಯಕ್ಷರಿಗೆ ದಿಡೀರನೇ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಈ ಘಟನೆಯಿಂದ ಬಿಜೆಪಿ ಮುಖಂಡರಲ್ಲಿ ಇರುಸು-ಮುರುಸು ಉಂಟಾಗಿದೆ. ಕಳೆದ ಕೆಲ ದಿನದಿಂದ ಬಿಜೆಪಿ ಸಚಿವರು ಶಾಸಕರು ವಾರ್ಡ್‌ನ ಅಧ್ಯಕ್ಷರುಗಳೇ ಹೋಗಿ ನಾಮಫ‌ಲಕ ವಿತರಿಸುತ್ತಿದ್ದರು.

ಇದನ್ನೂ ಓದಿ:ರಾಜ್ಯದ ಹಿತಕ್ಕೆ ಮಾರಕವಾದ ಸಮರ್ಥ ನಾಯಕತ್ವ ಕೊರತೆ : ಎಚ್‌.ಡಿ.ಕುಮಾರಸ್ವಾಮಿ

ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿಯಿಂದ ಅಭಿವೃದ್ಧಿಯ ಭರವಸೆ ನೀಡಲಾಗಿತ್ತು ಆದರೆ ಈಗ ಬೆಲೆ ಏರಿಕೆಯಿಂದ ಜನರ ಜೀವನ ಕಷ್ಟಕ್ಕೆ ಸಿಲುಕಿದೆ ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬೂತ್‌ ಅಧ್ಯಕ್ಷ ಶೇಖರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next