Advertisement

ನಿತೀಶ್‌ ವಿರುದ್ಧ ಸೂಕ್ತ ಕ್ರಮ: ಶರದ್‌ ಬಣ ಎಚ್ಚರಿಕೆ

06:50 AM Aug 29, 2017 | Team Udayavani |

ಹೊಸದಿಲ್ಲಿ: ಬಿಹಾರದಲ್ಲಿ ಬಿಜೆಪಿ ಜತೆ ಸಖ್ಯ ಬೆಳೆಸಿದ ಜೆಡಿಯುವಿನ ನಿತೀಶ್‌ ಕುಮಾರ್‌ ಬಣದ ಅಸಾಂವಿಧಾನಿಕ ನಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶರದ್‌ ಪವಾರ್‌ ಬಣ ಎಚ್ಚರಿಸಿದೆ. 

Advertisement

ಈ ಬಗ್ಗೆ ಮಾತನಾಡಿದ ಉಚ್ಚಾಟಿತ ಜೆಡಿಯು ಪ್ರಧಾನ ಕಾರ್ಯದರ್ಶಿ, ಶರದ್‌ ಆಪ್ತ ಜಾವೇದ್‌ ರಾಜಾ, ಶರದ್‌ ಪವಾರ್‌ ಬಣವೇ ನೈಜ ಜೆಡಿಯು. ಇದುವೇ ಪ್ರಮುಖ ಹುದ್ದೆಗಳನ್ನು ಹೊಂದಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಚಿಹ್ನೆ ನಮಗೇ ಸಲ್ಲಬೇಕೆಂದು ಕೇಳಿಕೊಂಡಿದ್ದಾಗಿ ಹೇಳಿದರು. ಜತೆಗೆ, ಶರದ್‌ ಅವರು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಅವರನ್ನು ಪಕ್ಷ ವಿರೋಧಿ ಎಂದು ಕರೆಯುವುದು, ಮಡಕೆ, ಪಾತ್ರೆ ಕಪ್ಪಾಗಿದೆ ಎಂದಂತೆ ಎಂದು ಲೇವಡಿ ಮಾಡಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next