Advertisement

ಇ.ಡಿ. ದಾಳಿ: ಶರದ್‌ ಪವಾರ್‌ -ಮೋದಿ ಭೇಟಿ

02:50 AM Apr 07, 2022 | Team Udayavani |

ಹೊಸದಿಲ್ಲಿ: ಮಹಾ ವಿಕಾಸ್‌ ಅಘಾಡಿ ನಾಯಕರ ವಿರುದ್ಧ ಜಾರಿ ನಿರ್ದೇಶನಾ ಲಯ (ಇ.ಡಿ)ದಾಳಿ ನಡೆಸುತ್ತಿರುವ ಬೆನ್ನಲ್ಲಿಯೇ ಮಾಜಿ ಸಚಿವ ಶರದ್‌ ಪವಾರ್‌ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದಾರೆ.

Advertisement

ಸಂಸತ್‌ ಭವನದಲ್ಲಿ 20 ನಿಮಿಷಗಳ ಕಾಲ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ. ಶಿವಸೇನೆ ಸಂಸದ ಸಂಜಯ ರಾವತ್‌ ಸೇರಿದಂತೆ ಶಿವಸೇನೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿಯ ಮುಖಂಡರ ವಿರುದ್ಧ ನಡೆಸಲಾಗುತ್ತಿರುವ ಇ.ಡಿ.ದಾಳಿಯ ಬಗ್ಗೆ ಪವಾರ್‌ ಚರ್ಚಿಸಿದ್ದಾರೆ.

ಇದನ್ನೂ ಓದಿ:ಜಾರಿ ನಿರ್ದೇಶನಾಲಯ ಸಮನ್ಸ್‌ ಹಿನ್ನೆಲೆ: ಎ.8ರಂದು ಟಿಟಿವಿ ದಿನಕರನ್‌ ವಿಚಾರಣೆ

ಜತೆಗೆ ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧವೂ ತಕರಾರು ತೆಗೆದಿದ್ದಾರೆ ಪವಾರ್‌. ಇದರ ಜತೆಗೆ ಲಕ್ಷದ್ವೀಪದ ಕ್ಷೇತ್ರದ ಸಂಸದ, ಎನ್‌ಸಿಪಿ ಮುಖಂಡ ಪಿ.ಪಿ.ಮೊಹಮ್ಮದ್‌ ಫೈಜಲ್‌ ಕೂಡ ಪ್ರಧಾನಿಯವರ ಜತೆಗೆ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next