Advertisement

ನೂತನ ಅನುಭವ ನೀಡಿದ ಶ್ರೀ ಶನಿಪೂಜಾ ಸಹಿತ ತಾಳಮದ್ದಳೆ

03:53 PM Jul 19, 2017 | |

ಕಳೆದ ಶತಮಾನದ ಆರಂಭದಿಂದ ಮುಂಬಯಿ ಮಹಾನಗರದಲ್ಲಿ ವಿಶೇಷವಾಗಿ ಫೋರ್ಟ್‌ ವಿಭಾಗದಲ್ಲಿ ಶನಿಮಹಾಪೂಜೆಯು ಜರಗುತ್ತಿತ್ತು. ಬಯಲು ಸೀಮೆಯ ಕವಿ ಚಿನ್ಮಯ ದಾಸರು ರಚಿಸಿದ ಯಕ್ಷಗಾನ ಶನಿಮಹಾತೆ¾ಯೆ ಇದಕ್ಕೆ ಆಧಾರ ಗ್ರಂಥವಾಗಿದೆ. ಅದರಲ್ಲಿ ವಿವರಿಸಿದ ಪೂಜಾ ವಿಧಾನವೇ ಶನಿಪೂಜೆಗೆ ಆಧಾರ. ವೈದಿಕರು ವಿರಚಿಸುವ ನವಗ್ರಹ ಶಾಂತಿ, ಶನಿಶಾಂತಿಗಳಿಗೆ ಮತ್ತು ಈ ಶನಿಪೂಜಾ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಶನಿದೇವರ ಫೋಟೊ ಇಟ್ಟು ಸರಳ ವಿಧಾನದಿಂದ ಪೂಜಾ ವಿಧಿಗಳನ್ನು ಮಾಡಿ ಅನಂತರ ಗ್ರಂಥ ದಲ್ಲಿನ ಹಾಡುಗಳನ್ನು ಒಬ್ಬರು ಹಾಡುವುದು, ಇನ್ನೊಬ್ಬರು ಅದರ ಅರ್ಥ ಹೇಳುವುದು. ಅದು ಪ್ರವಚನ ರೂಪದಲ್ಲಿ ತುಳು ಭಾಷೆಯಲ್ಲಿಯೇ ಅರ್ಥ ವಿವರಣೆ ನೀಡಿ, ಕೊನೆಗೆ ಮಂಗಳವಾಗಿ ಪ್ರಸಾದ ವಿತರಣೆಯಲ್ಲಿ ಕಾರ್ಯಕ್ರಮ ಮುಗಿಯುತ್ತಿತ್ತು. ಇದು ಇಡೀ ರಾತ್ರಿಯ ಕಾರ್ಯಕ್ರಮವಾಗಿತ್ತು.

Advertisement

ಆದರೆ ಪ್ರಸ್ತುತ ಕಾಲ ಬದಲಾಗಿದೆ. ಚಿನ್ಮಯ ದಾಸರ ಕೃತಿಯ ಎರಡು ಪುಟ ಓದಿ ಅನಂತರ ಯಕ್ಷಗಾನ ತಾಳಮದ್ದಳೆ ಕ್ರಮದಲ್ಲಿ ಜರಗಲು ಪ್ರಾರಂಭವಾಯಿತು. ಮೊದಲು ಹಿಮ್ಮೇಳ ಅನಂತರ ಯಕ್ಷಗಾನದ ಅರ್ಥಧಾರಿ ಕಲಾವಿದರು ಶನಿ ಪೂಜೆಯಲ್ಲಿ ಭಾಗವಹಿಸಲು ಪ್ರಾರಂಭವಾದದ್ದು ಈಗ ಇತಿಹಾಸ. 

ತಾಳಮದ್ದಳೆಗೆ ಸೀತಾ ನದಿ ಗಣಪಯ್ಯ ಶೆಟ್ಟಿ ವಿರಚಿತ ಪ್ರಸಂಗ  ಉಪಯೋಗಿಸಲ್ಪಡು ತ್ತಿತ್ತು. ಈ ಪ್ರಸಂಗ ಚಿನ್ಮಯ ದಾಸರ ಕೃತಿಯ ಆಧಾರದಿಂದಲೇ ರಚನೆಗೊಂಡಿದ್ದರೂ ಯಕ್ಷಗಾನ ಬಯಲಾಟಕ್ಕೆ ಅನುಕೂಲವಾಗುವಂತೆ ಇದರ ರಚನೆಯಾಗಿರುತ್ತದೆ.

ಆದರೆ ಶನಿಪೂಜಾ ಮಂಡಳಿ ಪಕ್ಷಿಕೆರೆ ತಂಡದ ಕಲಾವಿದರು ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಆಯೋಜನೆಯಲ್ಲಿ ಜೂ. 24 ರಿಂದ ಜು. 1 ರ ವರೆಗೆ ನಗರ ಹಾಗೂ ಉಪನಗರಗಳಲ್ಲಿ ಆರು ಶನಿಪೂಜಾ ಸಹಿತ ತಾಳಮದ್ದಳೆಯನ್ನು ಆಯೋಜಿಸಿ ಮುಂಬಯಿ ಕಲಾಭಿಮಾನಿಗಳಿಗೆ ವಿನೂತನ ಅನುಭನವವನ್ನು ನೀಡಿತ್ತು. ಪಕ್ಷಿಕೆರೆ ಶನಿಪೂಜೆಯ ಬಗ್ಗೆ ಹೇಳುವುದಾದರೆ ಅವರ ಪೂಜಾ ವಿಧಿ ವಿಧಾನಗಳು ಶ್ರೀ ಸತ್ಯನಾರಾಯಣ ಕಥಾ ಪೂಜೆಯನ್ನು ಹೋಲುತ್ತಿದ್ದರೆ, ಪ್ರಸಂಗದಲ್ಲಿ ನಂದಿ ಶೆಟ್ಟಿ, ರಾಮಗಾಣಿಗರಿಗೆ ಹೆಚ್ಚಿನ ಅವಕಾಶದಿಂದ ಹಾಸ್ಯವೇ ಪ್ರಧಾನವಾಯಿತು.

ವಿಕ್ರಮಾದಿತ್ಯ,  ಚಂದ್ರಸೇನನ ನಿರೂಪಣೆ, ಸರಪಾಡಿ ಅಶೋಕ್‌ ಶೆಟ್ಟಿ ಅವರ ಶನಿಯ ಪಾತ್ರವೂ ಉತ್ತಮವಾಗಿತ್ತು. ಕುದುರೆ ವ್ಯಾಪಾರಿಯಾಗಿ ಬಂದ ಶನಿದೇವನ ಪಾತ್ರ ಸಭಿಕರನ್ನು ನಡೆಗಡಲಲ್ಲಿ ತೇಲಿಸುವುದರಲ್ಲಿ ಯಶಸ್ವಿಯಾದರೂ ಶನಿದೇವರು ಕುದುರೆ ವ್ಯಾಪಾರಿ ಯಾಗಿ ಬಂದಿರುವುದು ವಿನಃ ಅನ್ಯ ಧರ್ಮ ಪ್ರಶಂಸೆಗೆ ಅಲ್ಲ ಎಂಬು ದಾಗಿ ರಾಜಾಜ್ಞೆಯಾದ ಕೂಡಲೆ  ಎಳನೀರು ಮತ್ತು ಫಲವಸ್ತುಗಳ ಅರ್ಪಣೆ, ಸಭೆಗೆ ಬಾಳೆ ಹಣ್ಣು ವಿತರಣೆ ಹಾಗೆಯೇ ಕೂಷ್ಮಾಂಡ ಫಲದಾನ ಎಂದಾಕ್ಷಣ ವೀಳ್ಯದೆಲೆಯಲ್ಲಿ ಹಸಿ ಅಡಿಕೆ ಮತ್ತು ನೂರು ರೂ. ದಕ್ಷಿಣೆ ಸಮೇತ ಎಲ್ಲ ಕಲಾವಿದರಿಗೆ ದಾನ ಮಾಡಿದ ದೃಶ್ಯ, ದೀಪಕರಾಗ ಹಾಡಿದಾಗ ನೂರಾರು ಹಣತೆಯಲ್ಲಿ ದೀಪಪ್ರಜ್ವಲಿಸುವ ದೃಶ್ಯ ಇವೆಲ್ಲವೂ ಮುಂಬಯಿ ಶನಿಭಕ್ತರಿಗೆ ವಿಶೇಷ ಅನುಭವವನ್ನು ನೀಡಿತು.

Advertisement

ಆದರೆ ಇದೆಲ್ಲ ಅಗತ್ಯವೆನಿಸು ವುದಿಲ್ಲ. ಹಾಗಾಗಿ ಇದು ಅನು ಕರಣೀಯವೂ ಅಲ್ಲ ಎಂದು ನನ್ನ ಅಭಿಪ್ರಾಯ. ಡೊಂಬಿವಲಿಯಲ್ಲಿ ನಡೆದ ಶನಿಪೂಜಾ ಸಹಿತ ತಾಳ ಮದ್ದಳೆಯಲ್ಲಿ ಭಾಗವತೆ ಅಮೃತಾ ಅಡಿಗ ಅವರು ಅತ್ಯುತ್ತಮವಾಗಿ ಭಾಗವತಿಕೆ ಮಾಡಿದರು. ಅದ ರಲ್ಲೂ ಚಿನ್ಮಯ ದಾಸರ ಕೃತಿಯ ಪದ್ಯವನ್ನೇ ಅವರು ಹಾಡಿ ಮುಗಿಸಿದ್ದು ವಿಶೇಷತೆಯಾಗಿತ್ತು. ಯಕ್ಷಗಾನದ ಎಲ್ಲ ಪ್ರಭೇದಗಳಿಗೆ ಮುಂಬಯಿಯಲ್ಲಿ ಸ್ವಾಗತವಿದೆ. ಇನ್ನು ಮುಂದಿನ ದಿನಗಳಲ್ಲಿ ಮೂರು ತಾಳಮದ್ದಳೆ ತಂಡಗಳು, ಮೂರು ಯಕ್ಷಗಾನ ಮೇಳಗಳು, ಜತೆಗೆ ಬಡಗುತಿಟ್ಟಿನ ಎರಡು ಮೇಳಗಳ ಕಾರ್ಯಕ್ರಮಗಳು ಮುಂಬಯಿ ಮತ್ತು ಉಪನಗರಗಳಲ್ಲಿ ಜರಗಲಿದ್ದು, ಎಲ್ಲಾ ಪ್ರದರ್ಶನಗಳಿಗೂ ಇಲ್ಲಿನ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂಬು  ದು ನನ್ನ ಆಶಯ.

ಕೊಲ್ಯಾರು ರಾಜು ಶೆಟ್ಟಿ.

Advertisement

Udayavani is now on Telegram. Click here to join our channel and stay updated with the latest news.

Next