Advertisement

Sewerage Manhole ಕುಸಿತ; ಸಂಚಾರಕ್ಕೆ ತೀವ್ರ ಆಡಚಣೆ

04:59 PM Aug 16, 2023 | Team Udayavani |

ಸಾಗರ: ಇಲ್ಲಿನ ಜನ್ನತ್ ನಗರದಿಂದ ಹಾನಂಬಿ ಹೊಳೆಗೆ ಹೋಗುವ ರಸ್ತೆ ಮಧ್ಯದಲ್ಲಿರುವ ಒಳಚರಂಡಿ ಮ್ಯಾನ್‌ಹೋಲ್ ಕುಸಿದಿರುವುದರಿಂದ ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

Advertisement

ನಾಲ್ಕು ರಸ್ತೆ ಕೂಡುವ ನಡುವೆ ಇರುವ ಮ್ಯಾನ್‌ಹೋಲ್ ಸಂಪೂರ್ಣ ಕುಸಿದು ಹೋಗಿದ್ದು ನೀರು ಉಕ್ಕಿ ಮೇಲೆ ಬರುತ್ತಿದೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಭಾರೀ ವಾಹನ ಸಂಚಾರಕ್ಕೆ ನಿಷೇಧ ಹೇರಿ ಬ್ಯಾರಿಕೇಡ್ ಅಳವಡಿಸಿದ್ದಾರೆ.

ರಸ್ತೆ ಹಾಳಾಗಿರುವ ಬಗ್ಗೆ ಒಳಚರಂಡಿ ಅಧಿಕಾರಿಗಳಿಗೆ, ನಗರಸಭೆಗೆ ಮಾಹಿತಿ ನೀಡಿದ್ದಾಗಲೂ ರಿಪೇರಿ ಮಾಡುವ ಕೆಲಸ ಮಾಡದಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರಸ್ತೆಯಲ್ಲಿ ಮೂರ‍್ನಾಲ್ಕು ಮ್ಯಾನ್‌ಹೋಲ್ ಒಡೆದು ಹೋಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next