Advertisement

ಚರಂಡಿಯಲ್ಲಿ ಗಲೀಜು ನೀರು, ದುರ್ನಾತ!

11:10 AM Apr 14, 2022 | Team Udayavani |

ಕೆ.ಎಸ್.ರಾವ್‌. ರಸ್ತೆ: ಮಳೆನೀರು ಹರಿಯುವ ನಗರದ ಹೃದಯಭಾಗದ ಬೃಹತ್‌ ಚರಂಡಿಯಲ್ಲಿ ಒಳಚರಂಡಿ ನೀರು ಹರಿಯುತ್ತ ಸ್ಥಳೀಯವಾಗಿ ವಾಸನೆ ವ್ಯಾಪಿಸಿದೆ. ಕೆ.ಎಸ್. ರಾವ್‌ ರಸ್ತೆಯ ಗಣೇಶ್‌ ಮಹಲ್‌ ಹಾಗೂ ಪ್ರಭಾತ್‌ ಟಾಕೀಸ್‌ ನಡುವಿನ ಚರಂಡಿಯಲ್ಲಿ ಗಲೀಜು ನೀರು ಹರಿಯುತ್ತಿದ್ದು ಸ್ಥಳೀಯವಾಗಿ ವಾಸನೆ ತುಂಬಿದೆ.

Advertisement

ಈ ಪ್ರದೇಶ ಸದಾ ಚಟುವಟಿಕೆಯ ತಾಣ. ವ್ಯವಹಾರ ಕೇಂದ್ರಿತ ಸ್ಥಳ. ಮಾಲ್‌, ಸಿನೆಮಾ ಥಿಯೇಟರ್‌ ಸೇರಿದಂತೆ ಹೆಚ್ಚು ಜನರು ಓಡಾಟ ನಡೆಸುವ ಕೇಂದ್ರ. ಆದರೆ, ಎಲ್ಲರಿಗೂ ಒಂದೇ ಸಮಸ್ಯೆ-ಬೃಹತ್‌ ಚರಂಡಿಯ ವಾಸನೆ! ವ್ಯಾಪಾರ ವಹಿವಾಟಿಗೂ ಇಲ್ಲಿ ಇದುವೇ ಸಮಸ್ಯೆಯಾಗಿದೆ. ಜತೆಗೆ ಸೊಳ್ಳೆ ಉತ್ಪತ್ತಿಯ ತಾಣವಾಗಿ ಬದಲಾಗಿದೆ.

ಕೆ.ಎಸ್. ರಾವ್‌ ರಸ್ತೆಯ ಗಣೇಶ್‌ ಮಹಲ್‌ ಹಾಗೂ ಪ್ರಭಾತ್‌ ಟಾಕೀಸ್‌ ನಡುವಿನ ಚರಂಡಿಯಲ್ಲಿ ಮಳೆನೀರು ಹಾಗೂ ಒಳಚರಂಡಿಯ ಗಲೀಜು ನೀರು ಹರಿಯುತ್ತಿದ್ದು, ಈ ಪರಿಸರ ದುರ್ವಾ ಸನೆಯಿಂದ ಕೂಡಿದೆ. ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರಿಗೆ ಶಾಸಕ ವೇದವ್ಯಾಸ್‌ ಕಾಮತ್‌ ಅವರು ಪತ್ರದ ಮೂಲಕ ಸೂಚಿಸಿದ್ದಾರೆ. ಆದರೆ ಇನ್ನೂ ಕೂಡ ಸಮಸ್ಯೆಗೆ ಪರಿಹಾರ ದೊರೆತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next