Advertisement

ಪ್ರತ್ಯೇಕತಾವಾದಿಗಳ ಬಂದ್‌ ಕರೆ: ಕಾಶ್ಮೀರ ಜನಜೀವನ ಸ್ತಬ್ಧ

12:01 PM Aug 12, 2017 | |

ಶ್ರೀನಗರ : ಸಂವಿಧಾನದ 35ಎ ವಿಧಿಗೆ ಕಾನೂನು ಸವಾಲು ಒಡ್ಡಲಾಗಿರುವುದನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿಗಳು ನೀಡಿದ ಬಂದ್‌ ಕರೆಯನ್ವಯ ಇಂದು ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನ ಬಹುತೇಕ ಸ್ತಬ್ಧಗೊಂಡಿದೆ. 

Advertisement

ಸಂವಿಧಾನದ 35ಎ ವಿಧಿಯನ್ನು ರದ್ದು ಮಾಡಿದಲ್ಲಿ  ಮುಸ್ಲಿಂ ಬಾಹುಳ್ಯದ ಜಮ್ಮು ಕಾಶ್ಮೀರದಲ್ಲಿ ಜನಸಂಖ್ಯೆಯ ನಮೂನೆಯು ಬದಲಾಗುವುದೆಂಬ ಭಯ ಪ್ರತ್ಯೇಕತಾವಾದಿಗಳದ್ದಾಗಿದೆ. 

ಪ್ರತ್ಯೇಕತಾವಾದಿಗಳ ಬಂದ್‌ ಕರೆಯನ್ವಯ ಇಂದು ಕಾಶ್ಮೀರದಲ್ಲಿ ಶಾಲೆ, ಕಾಲೇಜು, ವ್ಯಾಪಾರೋದ್ಯಮಗಳು, ಅಂಗಡಿ ಮುಂಗಟ್ಟುಗಳು, ಖಾಸಗಿ ಕಚೇರಿಗಳು ಮುಚ್ಚಿದ್ದವು. ಕಾಶ್ಮೀರದ ಬಹುತೇಕ ಭಾಗಗಳಲ್ಲಿ  ಬಸ್ಸುಗಳು ಇಂದು ರಸ್ತೆಯಿಂದ ದೂರ ಉಳಿದಿದ್ದವು. ಸರಕಾರಿ ಕಾರ್ಯಾಲಯಗಳಲ್ಲಿ  ಹಾಜರಾತಿ ತುಂಬ ಕ್ಷೀಣವಾಗಿತ್ತು. 

ಮಹಾರಾಜಗಂಜ್‌, ನೌಹಟ್ಟಾ, ಖನ್ಯಾರ್‌, ರೈನಾವಾರಿ ಮೊದಲಾದೆಡೆಗಳಲ್ಲಿ ಅಹಿತಕರ ಘಟನೆ ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸರು ಜನಸಂಚಾರವನ್ನು ನಿರ್ಬಂಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next