Advertisement

ಮಾನವ ಹಕ್ಕು ದಿನ : ಕಾಶ್ಮೀರ ಬಂದ್‌; ಜನಜೀವನ ಅಸ್ತವ್ಯಸ್ತ

12:24 PM Dec 10, 2018 | Team Udayavani |

ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿ ನಾಯಕರು ನೀಡಿರುವ ಬಂದ್‌ ಕರೆ ಪ್ರಯುಕ್ತ ಕಾಶ್ಮೀರದಲ್ಲಿ ಇಂದು ಸೋಮವಾರ ಸಾಮಾನ್ಯ ಜನಜೀವನ ಬಾಧಿತವಾಗಿದೆ.

Advertisement

ಶ್ರೀನಗರದಲ್ಲಿನ ಹೆಚ್ಚಿನ ಅಂಗಡಿಗಳು, ಮುಂಗಟ್ಟುಗಳು, ಪೆಟ್ರೋಲ್‌ ಸ್ಟೇಶನ್‌ಗಳು ಮುಚ್ಚಿವೆ. ಮಾನವ ಹಕ್ಕುಗಳ ದಿನದಂದೇ ಪ್ರತ್ಯೇಕತಾವಾದಿ ನಾಯಕರು ಬಂದ್‌ ಕರೆ ನೀಡಿದ್ದಾರೆ.

ಬಂದ್‌ನಿಂದಾಗಿ ಇಂದು ಸಾರ್ವಜನಿಕ ಸಾರಿಗೆ ಬಾಧಿತವಾಯಿತು. ಖಾಸಗಿ ಕಾರುಗಳು ಮತ್ತು ಆಟೋ ರಿಕ್ಷಾಗಳು ಸಂಚರಿಸುತ್ತಿವೆ. ಕಾಶ್ಮೀರ ಕಣಿವೆಯ ಇತರ ಜಿಲ್ಲೆಗಳಲ್ಲಿಯೂ ಬಂದ್‌ ನಡೆದಿರುವ ವರದಿಗಳು ಬಂದಿವೆ. 

Advertisement

Udayavani is now on Telegram. Click here to join our channel and stay updated with the latest news.

Next