Advertisement

ಹಿರಿಯ ರಂಗಭೂಮಿ ಕಲಾವಿದ ಕೊಡಗನೂರು ಜಯಕುಮಾರ್ ನಿಧನ

03:10 PM Oct 06, 2020 | keerthan |

ದಾವಣಗೆರೆ: ಹಿರಿಯ ರಂಗಭೂಮಿ ಕಲಾವಿದ, ಜ್ಯೂನಿಯರ್ ರಾಜ್ ಕುಮಾರ್ ಖ್ಯಾತಿಯ ಕೊಡಗನೂರು ಜಯಕುಮಾರ್ ಅವರು ಇಂದು ನಿಧನರಾದರು.

Advertisement

ಮೂಲತಃ ದಾವಣಗೆರೆಯವರಾದ ಕೊಡಗನೂರು ಜಯಕುಮಾರ್ ಗುಬ್ಬಿ ಕಂಪನಿಯ ಕಲಾವಿದರಾಗಿದ್ದವರು. ವೃತ್ತಿ ರಂಗಭೂಮಿಯಲ್ಲಿ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ ಅವರ ‘ಜನುಮದ ಜೋಡಿ’ ಸಿನಿಮಾ ಸೇರಿದಂತೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:ಜಂಬೂ ಸವಾರಿನೋ, ಬಂಬೂ ಸವಾರಿನೋ?

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ದಾವಣಗೆರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಪದ್ಮಮ್ಮ, ನಾಲ್ವರು ಪುತ್ರರು, ಮೂವರು ಪುತ್ರಿಯರನ್ನ ಅಗಲಿದ್ದಾರೆ. ಬುಧವಾರ ಬೆಳಗ್ಗೆ 9 ಕ್ಕೆ ಸ್ವಗ್ರಾಮ ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next