Advertisement

ಲಾಕ್ ಡೌನ್, ಸೀಲ್ ಡೌನ್ ಅಗತ್ಯವಿಲ್ಲ, ಶಾಲಾರಂಭಕ್ಕೆ ತೊಂದರೆಯಿಲ್ಲ: ಸಚಿವ ಸುಧಾಕರ್

12:13 PM Dec 29, 2020 | keerthan |

ಬೆಂಗಳೂರು: ಬ್ರಿಟನ್ ರೂಪಾಂತರ ಕೋವಿಡ್ ವೈರಸ್ ದೃಢಪಟ್ಟ ರಾಜ್ಯದ ಮೂವರು ಪ್ರಯಾಣಿಕರನ್ನು ಆಸ್ಪತ್ರೆಯಲ್ಲಿರಿಸಿದ್ದು, ಅವರ ಸಂಪರ್ಕಿತರ ಆರೋಗ್ಯ ನಿಗಾ ವಹಿಸಿಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಇಂಗ್ಲೆಂಡಿನಿಂದ‌ ಬಂದು ಕೋವಿಡ್ ಪಾಸಿಟಿವ್ ಬಂದವರ ವಂಶವಾಹಿನಿ ಪರೀಕ್ಷೆ ಮಾಡಲಾಗಿತ್ತು. ಬೆಂಗಳೂರಿನ ತಾಯಿ ಮತ್ತು ಮಗು ಸೇರಿದಂತೆ ಮೂವರಲ್ಲಿ ರೂಪಾಂತರ ಕೊರೊನಾ ದೃಢಪಟ್ಟಿದೆ. ಅಲ್ಲದೆ, ಪಾಸಿಟಿವ್ ಬಂದ ಇಪ್ಪತ್ತಾರು ಪ್ರಯಾಣಿಕರನ್ನು ಐಸೋಲೇಷನ್ ಮಾಡಲಾಗಿದೆ. 28 ದಿನಗಳ ಕಾಲ ಐಸೋಲೇಷನ್ ಮಾಡಲಾಗುತ್ತದೆ. ಇವರ ಪ್ರಾಥಮಿಕ, ದ್ವಿತೀಯ ಸಂಪರ್ಕವನ್ನು ಪತ್ತೆ ಮಾಡಿ ಆರೋಗ್ಯ ನಿಗಾವಹಿಸಲಾಗಿದೆ. ಜತೆಗೆ ವಿಮಾನದಲ್ಲಿದ್ದ ಸಹ ಪ್ರಯಾಣಿಕರನ್ನು ಪತ್ತೆ ಮಾಡಲಾಗಿದೆ. ಅವರಿಗೂ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಬೆಂಗಳೂರಿಗೂ ಕಾಲಿಡ್ತು ಯುಕೆ ವೈರಸ್! ಹತ್ತು ದಿನವಾದರೂ ಪತ್ತೆಯಾಗಿಲ್ಲ 361 ಪ್ರಯಾಣಿಕರು!

ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಿ

ಇಂಗ್ಲೆಂಡ್ ನಿಂದ ಬಂದು ಪರೀಕ್ಷೆಗೊಳಗಾಗದೇ ಬಾಕಿ ಉಳಿದಿರುವ ಪ್ರಯಾಣಿಕರನ್ನು ಪತ್ತೆಗೆ ಗೃಹ ಇಲಾಖೆ ಸಹಕಾರ ನೀಡಿದೆ.‌ ಅನೇಕರು ಪೋನ್ ಆಫ್ ಮಾಡಿದ್ದಾರೆ. ಮುಂದಿನ 48 ಗಂಟೆಯಲ್ಲಿ ಪತ್ತೆ ಮಾಡಲಾಗುತ್ತದೆ ಎಂದು ಗೃಹ ಇಲಾಖೆ ಭರವಸೆ ನೀಡಿದೆ. ಕಾನೂನು ಕ್ರಮಕ್ಕೆ ಮುಂದಾಗುವ ಮುಂಚೆಯೇ ಪರೀಕ್ಷೆಗೊಳಗಾಗದ ಪ್ರಯಾಣಿಕರು ಸೂಕ್ಷ್ಮತೆ ಅರ್ಥ ಮಾಡಿಕೊಂಡು ಸಮೀಪದ‌ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆಗೊಳಗಾಗಿ ಎಂದು ಮನವಿ ಮಾಡಿದರು.

Advertisement

ಲಾಕ್ ಡೌನ್ ಅಗತ್ಯವಿಲ್ಲ

ರೂಪಾಂತರ ಸೋಂಕು ತಡೆಯಲು ಎಲ್ಲಾ ಮುಂಜಾಗ್ರತೆ ಕೈಗೊಂಡಿದ್ದು, ಯಾವುದೇ ಸಮಸ್ಯೆಯಾಗವುದಿಲ್ಲ. ಜತೆಗೆ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ರೂಪಾಂತರ ಹಿನ್ನೆಲೆ ಯಾವುದೇ ಲಾಕ್ ಡೌನ್, ಸೀಲ್ ಡೌನ್ ಆಗತ್ಯ ಇಲ್ಲ. ಶಾಲೆ, ಕಾಲೇಜು ಆರಂಭಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next