Advertisement

ಸ್ಕೂಲ್‌ ವ್ಯಾನ್‌ ಬೈಕ್‌ ಮುಖಾಮುಖಿ:ನಾಲ್ವರ ದುರ್ಮರಣ 

03:29 PM Jan 18, 2018 | |

ಬೆಳಗಾವಿ: ಅಥಣಿಯ ಖೋತನಟ್ಟಿ ಕ್ರಾಸ್‌ ಬಳಿ ಗುರುವಾರ ಬೆಳಗ್ಗೆ ಖಾಸಗಿ ಶಾಲೆಯ ತೂಫಾನ್‌ ವ್ಯಾನೊಂದು ಬೈಕ್‌ಗೆ ಢಿಕ್ಕಿಯಾಗಿ  ಪಲ್ಟಿಯಾಗಿ ಭೀಕರ ಅವಘಡ ಸಂಭವಿಸಿದ್ದು  ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ದುರ್ಘ‌ಟನೆಯಲ್ಲಿ 12 ಕ್ಕೂ ಹೆಚ್ಚು ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ಸಂಕೇಶ್ವರ -ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದ್ದು  ಖೋತನಟ್ಟಿಯಿಂದ ಮಕ್ಕಳನ್ನು ಕರೆತರುತ್ತಿದ್ದ ಶಾಲಾ ವಾಹನಮತ್ತುವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಬೈಕ್‌ ಮುಖಾಮುಖಿಯಾಗಿವೆ. ಪರಿಣಾಮವಾಗಿ  ಬೈಕ್‌ನಲ್ಲಿದ್ದ ಮೂವರು ಸವಾರರು ಎಸೆಯಲ್ಪಟ್ಟಿದ್ದು, ಶಾಲಾ ವಾಹನ ಪಲ್ಟಿಯಾಗಿದೆ.

ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದರೆ, ತೂಫಾನ್‌ ಚಾಲಕ ಮತ್ತು ಇನೋರ್ವ ಬೈಕ್‌ ಸವಾರ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

ಮೃತರು ಯಲಿಹಡಲಗಿಯ ದಾನಪ್ಪ ಮುಗದುಮ್ಮ, ಮನೋಹರ ದೊಡ್ಮನಿ, ಅಪ್ಪಾಸಾಬ್‌ ಮರಾಠೆ ಮತ್ತು ವಾಹನ ಚಾಲಕ ಸಿದ್ದಗಿರಿ ಪೂಜಾರಿ ಎನ್ನುವವರಾಗಿದ್ದಾರೆ. 

12ಕ್ಕೂ ಹೆಚ್ಚು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಹಾರಾಷ್ಟ್ರದ ಮೀರಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಈರ್ವರ ಸ್ಥಿತಿ ಗಂಭೀರವಾಗಿದೆ. 

Advertisement

ಐಗಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next