Advertisement

Muddebihal: ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಒಂದೇ ಕುಟುಂಬದ ಇಬ್ಬರು ದುರ್ಮರಣ

03:57 PM Apr 22, 2024 | Suhan S |

ಮುದ್ದೇಬಿಹಾಳ: ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಮುದ್ದೇಬಿಹಾಳ-ವಿಜಯಪುರ ರಸ್ತೆಯ ಬಸರಕೋಡ ಕ್ರಾಸ್- ಢವಳಗಿಯಲ್ಲಿ ನಡೆದಿದೆ.

Advertisement

ಮೃತರನ್ನು ಮಸಬಿನಾಳ ಗ್ರಾಮದ ನಿವೃತ್ತ ಸೈನಿಕ‌ ಕಾರು ಚಲಾಯಿಸುತ್ತಿದ್ದ ದೊಡ್ಡಯ್ಯ  ರಾಚಯ್ಯ ಪುರಾಣಿಕಮಠ (37), ತಾಳಿಕೋಟೆ ತಾಲೂಕು ಜಲಪುರದ  ಪುಷ್ಪಾವತಿ ಶಿವಪುತ್ರಯ್ಯ ಹಿರೇಮಠ (55) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ  ದೊಡ್ಡಯ್ಯನ ಪತ್ನಿ ಈರಮ್ಮ ಪುರಾಣಿಕಮಠ(30), ಮಕ್ಕಳಾದ  ಶಿವಕುಮಾರ (11) ಸಂಪತಕುಮಾರ (8) ಸಣ್ಣಪುಟ್ಡ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮದುವೆ ಮುಗಿಸಿಕೊಂಡು ಮುದ್ದೇಬಿಹಾಳಕ್ಕೆ ಬರುತ್ತಿರುವಾಗ ಈ ಘಟನೆ ನಡೆದಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸೈ ಸಂಜಯ್ ತಿಪ್ಪರಡ್ಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next