Advertisement

ಸಾವಿತ್ರಿ ಬಾಯಿ ಫುಲೆ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ; ಬಿಜೆಪಿ, ಆರ್ ಎಸ್ ಎಸ್ ವಿರುದ್ಧ ಕಿಡಿ

10:02 AM Dec 27, 2019 | Nagendra Trasi |

ನವದೆಹಲಿ: ತಮ್ಮ ಕೂಗು ಕಾಂಗ್ರೆಸ್ ಪಕ್ಷ ಕೇಳಿಸಿಕೊಳ್ಳುತ್ತಿಲ್ಲ ಎಂದು ದೂರಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದ ಬಿಜೆಪಿ ಮಾಜಿ ಶಾಸಕಿ ಸಾವಿತ್ರಿ ಬಾಯಿ ಫುಲೆ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ವರ್ಷದ ಆರಂಭದಲ್ಲಿ ಬಿಜೆಪಿ ಮಾಜಿ ಶಾಸಕಿ ಸಾವಿತ್ರಿ ಬಾಯಿ ಫುಲೆ ಕಾಂಗ್ರೆಸ್ ಪಕ್ಷ ಸೇರಿದ್ದರು.

Advertisement

ನನ್ನ ಧ್ವನಿಯನ್ನು ಕಾಂಗ್ರೆಸ್ ಪಕ್ಷ ಕೇಳಿಸಿಕೊಳ್ಳುತ್ತಿಲ್ಲ. ಹೀಗಾಗಿ ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ನಾನು ಸ್ವಂತ ಪಕ್ಷ ಸ್ಥಾಪಿಸುವುದಾಗಿ ಫುಲೆ ಈ ಸಂದರ್ಭದಲ್ಲಿ ತಿಳಿಸಿದರು.

ಭಾರತೀಯ ಜನತಾ ಪಕ್ಷಕ್ಕೂ, ಕಾಂಗ್ರೆಸ್ ಗೂ ಯಾವುದೇ ವ್ಯತ್ಯಾಸವಿಲ್ಲ. ಸಂವಿಧಾನ ವಿರೋಧಿ ಹಾಗೂ ಇವಿಎಂ ಬಳಕೆ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ನಾನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬಳಿ ಮನವಿ ಮಾಡಿಕೊಂಡಿದ್ದೆ. ಆದರೆ ಇವಿಎಂ ಐಡಿಯಾ ತಮ್ಮ ಸರ್ಕಾರ ಜಾರಿಗೆ ತಂದಿದ್ದು, ಅದರ ವಿರುದ್ಧ ನಾನು ಪ್ರತಿಭಟನೆ ನಡೆಸುವುದಿಲ್ಲ ಎಂದು ಹೇಳಿರುವುದಾಗಿ ಫುಲೆ ತಿಳಿಸಿದ್ದಾರೆ.

ತಾನು “ಬಹುಜನ ಹಿತಾಯ, ಬಹುಜನ ಸುಖಾಯ” ಎಂಬ ಪಕ್ಷವನ್ನು ಸ್ಥಾಪಿಸುವುದಾಗಿ ತಿಳಿಸಿದರು. ಅಲ್ಲದೇ ಸಮಾಜದಲ್ಲಿ ಅಸಮಾನತೆಯ ಹುಟ್ಟುಹಾಕುತ್ತಿರುವ ಆರ್ ಎಸ್ ಎಸ್ ವಿರುದ್ಧವೂ ಆರೋಪಿಸಿದರು. ನಮ್ಮ ದೇಶದ ಸಂವಿಧಾನ ಮತ್ತು ಮೀಸಲಾತಿ ಅಪಾಯದಲ್ಲಿದೆ. ಇವಿಎಂ ಬಳಕೆ ಬಗ್ಗೆ ನಾನು ಯಾವಾಗಲೂ ಪ್ರತಿಭಟಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next