Advertisement

ಸರಬ್‌ಜಿತ್‌ ಕೊಲೆ ಕೇಸ್ :ಪಾಕ್‌ ಜೈಲು ಅಧಿಕಾರಿಗೆ ಅರೆಸ್ಟ್‌ ವಾರೆಂಟ್

12:02 PM Feb 15, 2017 | Team Udayavani |

ಲಾಹೋರ್‌ : 2013ರಲ್ಲಿ  ಪಾಕ್‌ ಜೈಲಿನಲ್ಲಿ  ನಡೆದಿದ್ದ ಭಾರತೀಯ ಪ್ರಜೆ ಸರಬ್‌ಜಿತ್‌ ಸಿಂಗ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ತನ್ನ ಮುಂದೆ ಹಾಜರಾಗಲು ವಿಫ‌ಲರಾದ ಉನ್ನತ ಜೈಲು ಅಧಿಕಾರಿಯೋರ್ವರ ವಿರುದ್ಧ ಪಾಕ್‌ ಕೋರ್ಟ್‌ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ. 

Advertisement

ಪಾಕಿಸ್ಥಾನದ ಕೋಟ್‌ ಲಖಪತ್‌ ಜೈಲಿನಲ್ಲಿ ಸರಬ್‌ಜಿತ್‌ ಸಿಂಗ್‌ನನ್ನು ಇಬ್ಬರು ಸಹ ಕೈದಿಗಳು ಹೊಡೆದು ಕೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಪದೇ ಪದೇ ಸಮನ್ಸ್‌ ಜಾರಿ ಮಾಡಿದ ಹೊರತಾಗಿಯೂ ಬಂಧೀಖಾನೆಯ ಡೆಪ್ಯುಟಿ ಸುಪರಿಂಟೆಂಡೆಂಟ್‌ ಕೋರ್ಟಿಗೆ ಖುದ್ದಾಗಿ ಹಾಜರಾಗಿರಲಿಲ್ಲ. 

ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶರು ಫೆ.17ರಂದು ಜೈಲು ಅಧಿಕಾರಿಯಾಗಿರುವ ಡಿವೈಎಸ್‌ಪಿ ಕೋರ್ಟಿನಲ್ಲಿ ಹಾಜರಾಗುವಂತೆ ನೋಡಿಕೊಳ್ಳಬೇಕೆಂದು ಲಾಹೋರ್‌ ಪೊಲೀಸ್‌ ಮುಖ್ಯಸ್ಥರಿಗೆ ನೊಟೀಸ್‌ ಜಾರಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next