Advertisement

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಸುಗುಣೇಂದ್ರ ಶ್ರೀ

02:29 PM May 29, 2022 | Team Udayavani |

ಮೈಸೂರು: ಅತ್ಯಂತ ಸರಳ, ಸುಂದರಭಾಷೆಯಾದ ಸಂಸ್ಕೃತ ಭಾಷೆ ವಿಶ್ವಭಾಷೆಯಾಗಿದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥಸ್ವಾಮೀಜಿ ಹೇಳಿದರು.

Advertisement

ಶ್ರೀ ಗಣಪತಿಸಚ್ಚಿದಾನಂದ ಸ್ವಾಮೀಜಿ ಯವರ 80ನೇಜನ್ಮದಿನೋತ್ಸವದ ಏಳನೇ ದಿನದಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಶ್ರೀಗಳು ಶುಭ ಕೋರಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಸಂಸ್ಕೃತ ಭಾಷೆಯು ಎಲ್ಲ ಭಾಷೆಗಳಿಗೂ ಮೂಲ. ಇದು ತಾಯಿ ಭಾಷೆ. ಅತ್ಯಂತಸರಳವಾಗಿರುವ ಈ ಭಾಷೆಯನ್ನು ಕಲಿಯುವುದು ಸುಲಭ ಎಂದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ವಿಶ್ವ ಸ್ವಾಮೀಜಿಯಾಗಿದ್ದಾರೆ. ಶ್ರೀಗಳು ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡಿದ್ದಾರೆ. ಅದನ್ನೇ ಉಸಿರಾಗಿಸಿಕೊಂಡು ಸಾರ್ಥಕತೆ ಪಡೆದಿದ್ದಾರೆ. ಆಧ್ಯಾತ್ಮ ಒಂದು ಶ್ರೇಷ್ಠ ವಿದ್ಯೆಯಾಗಿದೆ. ಹಾಗೆಯೇ ಶ್ರೀಗಳ ಜೀವನವೂ ಶ್ರೇಷ್ಠ ವಾದುದು. ಅವರು ಗೀತೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ಅತ್ಯಂತ ಶ್ರೇಷ್ಠ ಎಂದು ನುಡಿದರು.

ಉಡುಪಿಯಲ್ಲಿ ನಡೆಯಲಿರುವ ನಾಲ್ಕನೆಯ ಪರ್ಯಾಯ ಹಾಗೂ ಕೋಟಿಗೀತಾ ಯಜ್ಞ ಕಾರ್ಯಕ್ರಮಕ್ಕೆ ಗಣಪತಿ ಶ್ರೀ ಗಳನ್ನು ಪುತ್ತಿಗೆ ಮಠದ ಶ್ರೀಗಳು ಆಹ್ವಾನಿಸಿದರು.

Advertisement

ಇದಕ್ಕೂ ಮೊದಲು ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿಕಷ್ಟದಲ್ಲಿದ್ದ ಜನರು ಹಾಗೂ ಭಕ್ತರಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಧೈರ್ಯ ಹೇಳಿ ತಾಯಿಯ ಹಾಗೆ ಸಲುಹಿದರು ಎಂದು ತಿಳಿಸಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಸ್ವತಃ ಆಂಗ್ಲ ಭಾಷೆಯಲ್ಲಿ ಬರೆದಿರುವ 1800 ಸಂದೇಶಗಳುಳ್ಳ ಸ್ಕ್ರಿಪ್ಟ್ ಫಾರ್‌ ಸಕ್ಸಸ್‌ ಎಂಬ ಪುಸ್ತಕವನ್ನು ಪುಟ್ಟ ಬಾಲಕಿಯಿಂದ ಬಿಡುಗಡೆ ಮಾಡಿಸಿದ್ದು ವಿಶೇಷವಾಗಿತ್ತು. ಬೆಂಗಳೂರಿನ ಶ್ರೀ ರವಿಶಂಕರ ಗುರೂಜಿಯವರ ಆರ್ಟ್‌ ಆಫ್ ಲಿವಿಂಗ್‌ ಸದಸ್ಯರು ಶ್ರೀ ಗಳಿಗೆ ಶುಭ ಕೋರಿದರು.

 

Advertisement

Udayavani is now on Telegram. Click here to join our channel and stay updated with the latest news.

Next