Advertisement

ಸಂಕ್ರಾಂತಿ ಹಬ್ಬಕ್ಕೆ ಟಾಲಿವುಡ್‌ನಲ್ಲಿ ಮನರಂಜನೆಯ ಕಿಚ್ಚು: ಯಾವೆಲ್ಲಾ ಸಿನಿಮಾಗಳು ರಿಲೀಸ್?

06:10 PM Oct 07, 2023 | Team Udayavani |

ದಕ್ಷಿಣ ಸಿನಿಮಾರಂಗದಲ್ಲಿ ಅದರಲ್ಲೂ ಟಾಲಿವುಡ್‌ ಹಾಗೂ ಕಾಲಿವುಡ್‌ ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಮಹತ್ವ ಇದೆ. ಅದಕ್ಕೆ ಕಾರಣ ಬಾಕ್ಸ್‌ ಆಫೀಸ್‌ ನಲ್ಲಾಗುವ ಕಮಾಯಿ. ಬಹುತೇಕ ಬಿಗ್‌ ಸ್ಟಾರ್‌ ಗಳ ಬಹುನಿರೀಕ್ಷಿತ ಸಿನಿಮಾಗಳು ಸಂಕ್ರಾಂತಿ ಹಬ್ಬದಂದೇ ರಿಲೀಸ್‌ ಮಾಡುವ ಯೋಜನೆಯನ್ನು ಆಯಾ ಸಿನಿಮಾ ತಂಡಗಳು ಹಾಕಿಕೊಂಡಿವೆ.

Advertisement

ಟಾಲಿವುಡ್‌ ಸಿನಿಮಾರಂಗದಲ್ಲಿ 2024ರ ಸಂಕ್ರಾಂತಿಗೆ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ದಂಗಲ್‌ ಉಂಟಾಗುವ ಸಾಧ್ಯತೆಯಿದೆ. ಈಗಾಗಲೇ ಅದಕ್ಕೆ ಸಂಬಂಧಿಸಿದ ಸಿನಿಮಾಗಳು ಅನೌನ್ಸ್‌ ಆಗಿದೆ. ಮಹೇಶ್‌ ಬಾಬು, ವೆಂಕಟೇಶ್ ದಗ್ಗುಬಾಟಿ, ನಾಗಾರ್ಜುನ, ರವಿತೇಜ ಅವರ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ರಿಲೀಸ್‌ ಆಗಲಿದೆ. ಆ ಮೂಲಕ ವರ್ಷದ ಆರಂಭದಲ್ಲೇ ಟಾಲಿವುಡ್‌ ನಲ್ಲಿ ಕೋಟಿ ಕಮಾಯಿ ಆಗುವ ಸಾಧ್ಯತೆಯಿದೆ.

ಸಂಕ್ರಾಂತಿಗೆ ವೆಂಕಟೇಶ್ ʼ ಸೈಂಧವ್ʼ ರಿಲೀಸ್:‌ ಟಾಲಿವುಡ್‌ ಸೂಪರ್‌ ಸ್ಟಾರ್‌ ವೆಂಕಟೇಶ್‌ ಅವರ ಸಿನಿಮಾಗಳಿಗೆ ಪ್ರತ್ಯೇಕ ಫ್ಯಾನ್‌ ಬೇಸ್‌ ಇದೆ. ಅವರ ಕಳೆದ ಕೆಲ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಿಲ್ಲ. ಇದೀಗ ಅವರ ಮುಂದಿನ ಸಿನಿಮಾ ಅನೌನ್ಸ್‌ ಆಗಿದ್ದು, ಈ ಸಿನಿಮಾಕ್ಕೆ ʼಸೈಂಧವ್ʼ ಎಂದು ಟೈಟಲ್‌ ಇಡಲಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿ, ರುಹಾನಿ ಶರ್ಮಾ, ಆಂಡ್ರಿಯಾ ಜೆರೆಮಿಯಾ, ಆರ್ಯ ಮತ್ತು ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ.

ಬಹು ನಿರೀಕ್ಷಿತ ಸಿನಿಮಾ 2024 ರ ಸಂಕ್ರಾಂತಿ ಸಂದರ್ಭದಲ್ಲಿ ಅಂದರೆ ಜನವರಿ 13 ರಂದು ರಿಲೀಸ್‌ ಆಗಲಿದೆ.

Advertisement

ಮಹೇಶ್‌ ಬಾಬು ʼ ಗುಂಟೂರು ಕಾರಮ್ʼ ಮೇಲೆ ಹೆಚ್ಚಾದ ನಿರೀಕ್ಷೆ: ಪ್ರಿನ್ಸ್‌ ಮಹೇಶ್‌ ಬಾಬು ಅವರ ಮುಂದಿನ ಸಿನಿಮಾವಾದ ʼಗುಂಟೂರು ಕಾರಮ್ʼ ಸೆಟ್ಟೇರಿದ ದಿನದಿಂದ ಸದ್ದು ಮಾಡುತ್ತಲೇ ಇದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀಲೀಲಾ ಹಾಗೂ ಮೀನಾಕ್ಷಿ ಚೌಧರಿ ಅವರು ಕಾಣಿಸಿಕೊಳ್ಳಲಿದ್ದಾರೆ. ಜಗಪತಿ ಬಾಬು, ರಮ್ಯಾ ಕೃಷ್ಣನ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 12 ರಂದು ತೆರೆಗೆ ಬರಲಿದೆ.

“ನಾ ಸಾಮಿ ರಂಗಸಂಕ್ರಾಂತಿಗೆ ಫಿಕ್ಸ್:‌ ಟಾಲಿವುಡ್‌ ಸ್ಟಾರ್‌ ನಟ, ಕಿಂಗ್‌ ಅಕ್ಕಿನೇನಿ ನಾಗಾರ್ಜುನ 99ನೇ ಸಿನಿಮಾ “ನಾ ಸಾಮಿ ರಂಗ” ಇತ್ತೀಚೆಗೆ ಗ್ಲಿಂಪ್ಸ್‌ ವೊಂದನ್ನು ರಿಲೀಸ್‌ ಮಾಡಿ, ದೊಡ್ಡ ಹೈಪ್‌ ಕ್ರಿಯೇಟ್‌ ಮಾಡಿದೆ. ಮಾಸ್‌ ಅವತಾರದಲ್ಲಿ ಅಕ್ಕಿನೇನಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಟಾಲಿವುಡ್‌ ನಲ್ಲಿ ಹವಾ ಸೃಷ್ಟಿಸೋದು ಪಕ್ಕಾ ಎಂದು ಹೇಳಲಾಗುತ್ತಿದೆ.

ವಿಜಯ್ ಬಿನ್ನಿ ನಿರ್ದೇಶನದ ಈ ಸಿನಿಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಂಗೀತ ನೀಡಲಿದ್ದಾರೆ. ಪ್ರಸನ್ನ ಕುಮಾರ್ ಬೆಜವಾಡ ಸಂಭಾಷಣೆ ಬರೆದಿದ್ದಾರೆ.

ʼನಾ ಸಾಮಿ ರಂಗʼ ಸಿನಿಮಾ ಸಂಕ್ರಾಂತಿಗೆ ರಿಲೀಸ್‌ ಆಗಲಿದೆ ಎಂದು ಚಿತ್ರತಂಡ ಅನೌನ್ಸ್‌ ಮಾಡಿದೆ ಆದರೆ , ಅಧಿಕೃತವಾಗಿ ರಿಲೀಸ್‌ ಡೇಟ್‌ ಇನ್ನಷ್ಟೇ ಅನೌನ್ಸ್‌ ಆಗಬೇಕಿದೆ.

ಟಕ್ಕರ್‌ ಕೊಡಲಿದೆ ರವಿತೇಜ ಸಿನಿಮಾ: ಇನ್ನು ಮಾಸ್‌ ಮಹಾರಾಜ ರವಿತೇಜ ಅವರು ಬಹು ನಿರೀಕ್ಷಿತ ಸಿನಿಮಾವೊಂದು ಸಂಕ್ರಾಂತಿ ರಿಲೀಸ್‌ ಮೇಲೆ ಕಣ್ಣಿಟ್ಟಿದೆ. ಇತ್ತೀಚೆಗೆ ʼಟೈಗರ್ ನಾಗೇಶ್ವರ್ ರಾವ್ʼ ಟ್ರೇಲರ್‌ ಮೂಲಕ ಗಮನ ಸೆಳೆದಿರುವ ರವಿತೇಜ ಅವರ ʼಈಗಲ್ʼ ಸಿನಿಮಾ ಸಂಕ್ರಾಂತಿಗೆ ರಿಲೀಸ್‌ ಆಗಲಿದೆ ಎನ್ನಲಾಗಿದೆ.  ಜನವರಿ 12 ರಂದು ಈ ಸಿನಿಮಾ ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next