Advertisement

ಸಂಯುಕ್ತಾ ಪ್ರಕರಣ: ಕವಿತಾ ರೆಡ್ಡಿ ವಿರುದ್ಧ ದೂರು ದಾಖಲು

11:29 AM Sep 07, 2020 | sudhir |

ಬೆಂಗಳೂರು: ಉದ್ಯಾನವನದಲ್ಲಿ ನಟಿ ಸಂಯುಕ್ತಾ ಹೆಗ್ಡೆ ಧರಿಸಿದ್ದ ಬಟ್ಟೆಗೆ ಕಾಂಗ್ರೆಸ್‌ ಪಕ್ಷದ ವಕ್ತಾರೆ ಕವಿತಾ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದ ವಿವಾದ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

Advertisement

“ಕವಿತಾ ರೆಡ್ಡಿ ಹಾಗೂ ಇತರರು ತಮ್ಮ ಮೇಲೆ ಹಲ್ಲೆ ನಡೆಸಿ, ಅವಮಾನಿಸಿದ್ದಾರೆ’ ಎಂದು ಆರೋಪಿಸಿ ಸಂಯುಕ್ತಾ ಹೆಗ್ಡೆ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೆ. 4ರಂದು ಅಗರ ಕೆರೆಯ ಉದ್ಯಾನ ವನದಲ್ಲಿ ಸಂಯುಕ್ತಾ ತನ್ನ ಸ್ನೇಹಿತೆಯರ ಜತೆ ವ್ಯಾಯಾಮ ಮಾಡುತ್ತಿದ್ದಾಗ ಕೆಲವರು ಆಕೆ ಧರಿಸಿದ್ದ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕವಿತಾ ರೆಡ್ಡಿಯನ್ನು ಕರೆಸಿದ್ದರು. ಇದೇ ವಿಚಾರದಲ್ಲಿ ಬಳಿಕ ವಾಗ್ವಾದ ನಡೆದಿತ್ತು. ಇಡೀ ಘಟನೆಯನ್ನು ಸಂಯುಕ್ತಾ ತನ್ನ ಇನ್ಸ್‌ಟಾ ಗ್ರಾಂ ಖಾತೆಯಲ್ಲಿ ಲೈವ್‌ ಮಾಡಿದ್ದು, ಕೆಲವರು ಸಂಯುಕ್ತಾ ಡ್ರಗ್ಸ್‌ ಸೇವಿಸಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ಸಂಯುಕ್ತಾ ನಿರಾಕರಿಸಿದ್ದರು. ಜತೆಗೆ ವೀಡಿಯೋದಲ್ಲಿ ಕವಿತಾ ರೆಡ್ಡಿ ಹಲ್ಲೆ ಮಾಡಲು ಮುಂದಾಗಿ ದ್ದುದು ಸೆರೆಯಾಗಿತ್ತು. ಇವೆಲ್ಲ ಪೊಲೀಸ್‌ ಸಿಬಂದಿ ಸಮ್ಮುಖದಲ್ಲಿಯೇ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next