Advertisement

ಕಲಬೆರಕೆ ತುಪ್ಪ ಮಾರಾಟ: ಓರ್ವ ವಶಕ್ಕೆ

03:20 PM Oct 21, 2022 | keerthan |

ವಿಜಯಪುರ: ಬೆಂಗಳೂರಿನಿಂದ ಕಲಬೆರಕೆ ತುಪ್ಪ ತರಿಸಿ, ಮಾರಾಟ ಮಾಡುತ್ತಿದ್ದ ನಗರದ ಹಾಳು ಮಾರಾಟ ಕೇಂದ್ರದ ಮೇಲೆ ಶುಕ್ರವಾರ ಆಹಾರ ಸುರಕ್ಷತಾ-ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಾಳಿ ನಡೆಸಿ, 30 ಕೆ.ಜಿ. ಕಲಬೆರಕೆ ಶಂಕಿತ ತುಪ್ಪ ವಶಕ್ಕೆ ಪಡೆದಿದ್ದಾರೆ.

Advertisement

ನಗರದ ಸಾಯಿ ಪಾರ್ಕ್ ಪರಿಸದಲ್ಲಿನ ಶ್ರೀಬಾಲಾಜಿ ಹಾಲಿನ ಡೈರಿ ಹೆಸರಿನ ಹಾಲು ಮಾರಾಟ ಕೇಂದ್ರದ ಮೇಲೆ ಶುಕ್ರವಾರ ದಾಳಿ ನಡೆದಿದೆ. ದಾಳಿ ವೇಳೆ ಬೆಂಗಳೂರಿನಿಂದ ತರಿಸಲಾಗಿದ್ದ ಕಲಬೆರಕೆ ಎನ್ನಲಾದ ಟಿನ್‍ನಲ್ಲಿ ತುಂಬಿದ್ದ ತುಪ್ಪ, ತುಪ್ಪದ ಬಾಟಲ್, ಸ್ಟಿಕರ್ ಸೇರಿದಂತೆ ಪ್ಯಾಕಿಂಗ್ ಸಾಮಗ್ರಿ ಹಾಗೂ ಮುದ್ದೇಬಿಹಾಳ ತಾಲೂಲಿಕ ಹೆಸರಿನಲ್ಲಿ ಬಿಲ್‍ಬುಕ್ ಲಭ್ಯವಾಗಿವೆ. ಕಲಬೆರಕೆ ಆರೋಪದಲ್ಲಿ ರವಿ ಬಿರಾದಾರ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಹಲವು ದಿನಗಳಿಂದ ಈ ಮಳಿಗೆ ಮೇಲೆ ನಿಗಾ ಇಟ್ಟಿದ್ದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಶುಕ್ರವಾರ ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ. ವಶಪಡಿಸಿಕೊಂಡ ತುಪ್ಪವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಕಲಬೆರಕೆ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next