Advertisement

ಸಜೀಪನಡು : ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

12:12 PM Mar 15, 2017 | Team Udayavani |

ಬಂಟ್ವಾಳ: ಸಜೀಪನಡು ಗ್ರಾಮದಲ್ಲಿ ಸುಮಾರು 38 ಲಕ್ಷ ರೂ.ಅನುದಾನದ ವಿವಿಧ ಕಾಮಗಾರಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್‌ ಶಂಕುಸ್ಥಾಪನೆ ನೆರವೇರಿಸಿದರು.

Advertisement

ಸಜೀಪನಡು ಹೊಳೆಬದಿಯ ತಡೆಗೋಡೆ ರಚನೆ 15 ಲ.ರೂ., ಸಜೀಪ ಹೊಳೆಬದಿ ರಸ್ತೆ  2 ಲ.ರೂ., ಬೋಳಮೆ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ 10 ಲ.ರೂ., ತಂಚಿಬೊಟ್ಟು ರಸ್ತೆ 3 ಲ.ರೂ.ರಸ್ತೆ 2 ಲ.ರೂ., ಮರ್ಸಲಚ್ಚಿಲ್‌ ಕಾಲು ಸಂಕ ರಚನೆ  2 ಲ.ರೂ., ಕೋಣಿಮಾರು ಕಿರು ಸೇತುವೆ ರಚನೆ 5 ಲ.ರೂ. ವೆಚ್ಚದಲ್ಲಿ ನಡೆಯಲಿವೆ. 

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ನಿರ್ದೇಶಕ ಎಸ್‌. ಅಬ್ಟಾಸ್‌ ಸಜೀಪ, ಜಿಲ್ಲಾ ವಕ್ಫ್ ಬೋರ್ಡ್‌ ಉಪಾಧ್ಯಕ್ಷ‌ ಎಸ್‌. ಅಬೂಬಕ್ಕರ್‌ ಸಜೀಪ, ಇರಾ ಗ್ರಾ.ಪಂ. ಅಧ್ಯಕ್ಷ ರಝಕ್‌ ಕುಕ್ಕಾಜೆ, ಸಜೀಪನಡು ಗ್ರಾ.ಪಂ. ಮಾಜಿ ಅಧ್ಯಕ್ಷ ಸೋಮನಾಥ್‌ ಭಂಡಾರಿ, ಗ್ರಾ.ಪಂ. ಸದಸ್ಯರಾದ ರಫೀಕ್‌ ಸಿರಾಜ್‌ ಕಿನ್ಯ, ಯುವ ಕಾಂಗ್ರೆಸ್‌ ಅಧ್ಯಕ್ಷ ಆಸಿಫ್‌, ಅಬ್ದುಲ್‌ ರಹಿಮಾನ್‌, ಸತ್ತಾರ್‌, ಬಶೀರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next