Advertisement

ಕಲ್ಲಂಗಡಿ ವ್ಯಾಪಾರಕ್ಕಿಳಿದ ಸಾಗರ ನಗರಸಭೆ ಸದಸ್ಯ!

12:55 PM May 22, 2020 | Naveen |

ಸಾಗರ: ಲಾಭದ ಆಶಯವಿಲ್ಲದೆ ಬೆಳೆಗಾರ ಹಾಗೂ ಗ್ರಾಹಕರ ನಡುವೆ ಖರೀದಿ ಸೇತುವೆ ನಿರ್ಮಿಸುವ ಉದ್ದೇಶದಿಂದ ನಗರಸಭೆಯ ಸದಸ್ಯ ಬಿ.ಎಚ್‌.ಲಿಂಗರಾಜ್‌ ತರಕಾರಿ ಹಾಗೂ ಹಣ್ಣಿನ ವ್ಯಾಪಾರದ ಅಖಾಡಕ್ಕೆ ಗುರುವಾರ ಇಳಿದು ಜನರಲ್ಲಿ ಅಚ್ಚರಿ ಮೂಡಿಸಿದರು.

Advertisement

ಇಲ್ಲಿನ 28ನೇ ವಾರ್ಡ್‌ ಸದಸ್ಯ ಲಿಂಗರಾಜ್‌ ನಗರದ ಇಂದಿರಾ ಗಾಂಧಿ ಕಾಲೇಜು ರಸ್ತೆಯಲ್ಲಿ ಅನುಭವದ ಕೊರತೆಯ ನಡುವೆ ವ್ಯಾಪಾರ ನಡೆಸಿದ್ದುದು ಕಂಡುಬಂದಿತು. ಈ ಕುರಿತು ಅವರು ಪತ್ರಿಕೆಯೊಂದಿಗೆ ಮಾತನಾಡಿ, ರೈತಪರವಾದ ಮತ್ತು ಗ್ರಾಹಕ ಸ್ನೇಹಿಯಾದ ಒಂದು ವ್ಯವಸ್ಥೆ ಕಲ್ಪಿಸಲು ಉದ್ದೇಶವಿದೆ. ಲಾಭ ಮಾಡಿಕೊಳ್ಳುವ ಆಸೆಯಿಲ್ಲ. ನ್ಯಾಮತಿಯಿಂದ ತರಕಾರಿಗಳನ್ನು ತರಲಾಗಿದೆ. ಸ್ಥಳೀಯ ಕಲ್ಲಂಗಡಿ ಬೆಳೆಗಾರರಿಂದ ಹಣ್ಣುಗಳನ್ನು ಖರೀದಿಸಲಾಗಿದೆ. 6 ರೂ. ಗೆ ಒಂದು ಕೆಜಿ ಕಲ್ಲಂಗಡಿ ಹಣ್ಣು ಮಾರಾಟ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನೇರ ಸೇತುವೆಯಾಗುವ ಅಂಗಡಿ ವ್ಯವಸ್ಥೆ ಮಾಡುವ ಯೋಚನೆಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next