Advertisement

ಮುಂಬಯಿಯಲ್ಲಿ ಕೇಸರಿ ಅಲೆ: ಮರಾಠರಿಗೆ ಮಣಿದ ಸರಕಾರ

08:15 AM Aug 10, 2017 | Harsha Rao |

ಮುಂಬಯಿ: ಸರಕಾರಿ ಉದ್ಯೋಗ ಮತ್ತು ಕಾಲೇಜು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಬುಧವಾರ ಮಹಾರಾಷ್ಟ್ರದ ಮರಾಠ ಸಮುದಾಯ ಮುಂಬಯಿಯ ಬೀದಿಗಳಲ್ಲಿ ಬೃಹತ್‌ ಮೌನ ಪ್ರತಿಭಟನ ರ್ಯಾಲಿ ನಡೆಸಿತು. ಇದರಲ್ಲಿ ಕೇಸರಿ ಬಾವುಟ ಹಿಡಿದು ಕೊಂಡ 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಇಡೀ ಆಜಾದ್‌ ಮೈದಾನ ಕೇಸರಿಮಯವಾಯಿತು.

Advertisement

ಮರಾಠ ಸಮುದಾಯದ ಈ ಬಲ ಪ್ರದರ್ಶನಕ್ಕೆ ಸಿಎಂ ದೇವೇಂದ್ರ ಫ‌ಡ್ನವೀಸ್‌ ಮಣಿದಿದ್ದು, ಮುಖ್ಯ ಬೇಡಿಕೆಗಳನ್ನು ಈಡೇರಿಸು ವುದಾಗಿ ಭರವಸೆ ನೀಡಿದ್ದಾರೆ. ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಮರಾಠರಿಗೂ ವಿಸ್ತರಿಸುವುದಾಗಿ ಮತ್ತು ಭೂಮಿ ನೀಡುವುದಾಗಿ ಫ‌ಡ್ನವೀಸ್‌ ಆಶ್ವಾಸನೆಯಿತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಪ್ರತಿಭಟನೆ ಯಶಸ್ವಿಯಾಗಿದ್ದು, ಇದು ಈ ವರ್ಷ ಮರಾಠ ಸಮುದಾಯ ನಡೆಸಿದ 58ನೇ ಪ್ರತಿಭಟನ ಸಮಾವೇಶವಾಗಿತ್ತು. ಪ್ರತಿಭಟನೆ ಶಾಂತಿಯುತ ವಾಗಿ ನಡೆಯಿತಾದರೂ ಸಂಚಾರ ತೀವ್ರ ಅಸ್ತವ್ಯಸ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next