Advertisement

Thiruvananthapuram ಮಕರಜ್ಯೋತಿಗೆ ಸಜ್ಜಾದ ಶಬರಿಮಲೆ

12:48 AM Dec 31, 2023 | Team Udayavani |

ತಿರುವನಂತಪುರ: ಮಂಡಲ ಪೂಜೆ ಮುಕ್ತಾಯದ ಬಳಿಕ ಮುಚ್ಚಲಾಗಿದ್ದ ಶಬರಿಮಲೆ ಅಯ್ಯಪ್ಪ ದೇಗುಲದ ದ್ವಾರವನ್ನು ಶನಿವಾರ ಸಂಜೆ ಮತ್ತೆ ತೆರೆಯಲಾಗಿದ್ದು, ಮಕರವಿಳಕ್ಕು ಉತ್ಸವಕ್ಕೆ (ಮಕರಜ್ಯೋತಿ) ಶಬರಿಮಲೆ ಸಜ್ಜುಗೊಂಡಿದೆ.

Advertisement

ಮುಖ್ಯ ಅರ್ಚಕರಾದ ಪಿ.ಎನ್‌. ಮಹೇಶ್‌ ನಂಬೂದರಿ ಅವರು ತಂತ್ರಿ ಕಂಡರಾರು ಮಹೇಶ್‌ ಮೋಹನರಾರು ಅವರ ಉಪಸ್ಥಿತಿಯಲ್ಲಿ ದೇಗುಲದ ಗರ್ಭಗುಡಿಯ ಬಾಗಿಲನ್ನು ತೆರೆದಿದ್ದಾರೆ. ಈ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿ ಮಾಹಿತಿ ನೀಡಿದ್ದು, ಜ. 15ರಂದು ಮಕರಜ್ಯೋತಿ ಉತ್ಸವ ನಡೆಯಲಿದ್ದು, ಜ. 13 ಮತ್ತು 14ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ಉತ್ಸವದ ದಿನದಂದು ತಿರುವಾಭರಣ ಸ್ವೀಕಾರ, ದೀಪಾರಾಧನೆಗೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ. ಜ. 20ರ ವರೆಗೂ ದೇಗುಲ ದರ್ಶನಕ್ಕೆ ಅವಕಾಶ ಇದೆ ಎಂದು ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next