Advertisement

ನಗರದಲ್ಲಿ ‘ಸಾಮರ್ಥ್ಯ’ ಪ್ರದರ್ಶನ

04:28 PM Sep 14, 2021 | Team Udayavani |

ಹೊಸಬರ ಸಾಮರ್ಥ್ಯ ಎಂಬ ಚಿತ್ರ ಸೆಟ್ಟೇರಿರೋದು ನಿಮಗೆ ಗೊತ್ತಿರಬಹುದು. ಈಗ ಬಿರುಸಿನ ಚಿತ್ರೀಕರಣದಲ್ಲಿ ಚಿತ್ರತಂಡ ನಿರತವಾಗಿದೆ. ಚಿಕ್ಕಬಾಣಾವರ,ಕಂಠೀರವ ಸ್ಟುಡಿಯೋ, ಖಾಸಗಿ ಬಂಗಲೆಗಳು, ಹಾಗೂ ಪ್ರಮುಖ ರಸ್ತೆಗಳಲ್ಲಿ ಚಿತ್ರದ ಪ್ರಮುಖ ಕಲಾವಿದರುಗಳು ಹಾಗೂ ಸಹಕಲಾವಿದರುಗಳು ಪಾಲ್ಗೊಂಡಿದ್ದ ದೃಶ್ಯಗಳನ್ನು ಚಿತ್ರತಂಡ ಚಿತ್ರೀಕರಿಸಿ ಕೊಂಡಿದೆ.

Advertisement

ಎಚ್‌. ವಾಸು ಈ ಸಿನಿಮಾದ ನಿರ್ದೇಶಕರು. ರಾಜರಬಂಡಿ ಕಾರ್ತಿಕ್‌ ಈ ಚಿತ್ರದ ನಿರ್ಮಾಪಕರು.

ಬಾಲಾಜಿ ಶರ್ಮ, ಗಗನ ಮಧು, ಶೋಭರಾಜ್‌, ಅವಿನಾಶ್‌, ರವೀಂದ್ರನಾಥ್‌, ಪೆಟ್ರೋಲ್‌ ಪ್ರಸನ್ನ,ಕಾಮಿಡಿ ಕಿಲಾಡಿಗಳು ಸಂತು, ಸ್ವಾತಿ, ಶಶಿಕುಮಾರ್‌, ಮುಂತಾದವರಿದ್ದಾರೆ.

ಚಿತ್ರಕ್ಕೆ ಶಶಿ ಸಂಭಾಷಣೆ, ಎ.ವಿ.ಕೃಷ್ಣ ಕುಮಾರ್‌ (ಕೆ.ಕೆ) ಛಾಯಾಗ್ರಹಣ, ಅರುಣ್‌ ಆಂಡ್ರೂé ಸಂಗೀತ,ಕೆ.ಕಲ್ಯಾಣ್‌, ವಿ ನಾಗೇಂದ್ರ ಪ್ರಸಾದ್‌, ವಿಶ್ವಾ.ಜಿ ಸಾಹಿತ್ಯ, ಅರ್ಜುನ್‌ ಸಾಹಸವಿದೆ. ಲವ್‌ ಕ್ರೈಂ ಕಥಾ ವಸ್ತುವಿನೊಂದಿಗೆ ಈ ಸಿನಿಮಾ ಸಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next