Advertisement

ಅಪಾಯಕಾರಿ ರಬ್ಬರ್‌ ಕೋನ್‌ಗಳ ತೆರವು ಆರಂಭ

07:15 PM Feb 14, 2022 | Team Udayavani |

ಮಹಾನಗರ : ನಗರದ ವಿವಿಧ ಜಂಕ್ಷನ್‌ಗಳಲ್ಲಿ ಸುಗಮ ಸಂಚಾರಕ್ಕೆ ಅಳವಡಿಸಿದ್ದ ರಬ್ಬರ್‌ ಕೋನ್‌ಗಳು ಕಿತ್ತು ಹೋಗಿರುವ ಕಾರಣದಿಂದ ಸಮಸ್ಯೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಅದರ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

Advertisement

“ಇದು ಕೋನ್‌ಗಳದ್ದೇ ಪ್ರಾಬ್ಲಿಂ’ ಎಂಬ ಶೀರ್ಷಿಕೆಯಲ್ಲಿ “ಉದಯವಾಣಿ ಸುದಿನ’ದಲ್ಲಿ ಫೆ.10ರಂದು “ಫೂಟೋ ನ್ಯೂಸ್‌ ಸ್ಟೋರಿ’ ಪ್ರಕಟ ವಾಗಿತ್ತು. ಸಮಸ್ಯೆ ಆಗುವ ಕೋನ್‌ಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ನಗರ ಸಂಚಾರ ಪೊಲೀಸರು “ಸುದಿನ’ಕ್ಕೆ ತಿಳಿಸಿದ್ದರು. ಇದರಂತೆ ನಗರ ದಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಬಂಟ್ಸ್‌ಹಾಸ್ಟೆಲ್‌ನ ಮೆಡಿಕೇರ್‌ ಸೆಂಟರ್‌ ಮುಂಭಾಗದಲ್ಲಿ ಕಿತ್ತುಹೋಗಿದ್ದ ರಬ್ಬರ್‌ ಕೋನ್‌ಗಳನ್ನು ಸಂಪೂರ್ಣ ತೆರವು ಮಾಡಲಾಗಿದೆ. ಜತೆಗೆ ಬಲ್ಮಠದ ಕಲೆಕ್ಟರ್ ಗೇಟ್‌ ಭಾಗದಲ್ಲಿ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿದ್ದ ಬೋಲ್ಟ್‌ಗಳನ್ನು ಕೂಡ ತೆಗೆಯಲಾಗಿದೆ. ಕರಂಗಲ್ಪಾಡಿ ಸಹಿತ ನಗರದ ಕೆಲವು ಭಾಗ ದಲ್ಲಿರುವ ಕಿತ್ತು ಹೋದ ಅಪಾಯಕಾರಿ ರಬ್ಬರ್‌ ಕೋನ್‌ಗಳನ್ನು ತೆರವು ಮಾಡುವ ಕಾರ್ಯಾಚರಣೆ ಕೆಲವೇ ದಿನದಲ್ಲಿ ನಡೆಯಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

“ತೆರವು ಆರಂಭ’
ನಗರದ ವಿವಿಧೆಡೆ ಅಳವಡಿಸಿರುವ ರಬ್ಬರ್‌ ಕೋನ್‌ಗಳು ಮುರಿದು ಸಮಸ್ಯೆ ಆಗಿರುವ ಬಗ್ಗೆ “ಸುದಿನ’ದಲ್ಲಿ ಬಂದ ವರದಿ ಯನ್ನು ಗಮನಿಸಲಾಗಿದೆ. ಇದೀಗ ತೆರವು ಕಾರ್ಯಾಚರಣೆ ಆರಂಭಿ ಸಲಾಗಿದೆ. ಮುಂದಿನ 1 ವಾರದೊಳಗೆ ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಇರುವ ಎಲ್ಲ ರಬ್ಬರ್‌ ಕೋನ್‌ಗಳನ್ನು ಹಾಗೂ ಬೋಲ್ಟ್ ಗಳನ್ನು ತೆಗೆಯಲಾಗುವುದು.

-ಎಂ.ಎ.ನಟರಾಜ್‌, ಎಸಿಪಿ, ಸಂಚಾರ ವಿಭಾಗ, ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next