Advertisement

ಆರ್‌ಟಿಐ ಕಾರ್ಯಕರ್ತನ ಮನೆಗೆ ಮರಳು ಮಾಫಿಯಾದವರ ಮುತ್ತಿಗೆ

01:00 AM Dec 25, 2022 | Team Udayavani |

ಕೋಟ: ಮರಳುಗಾರಿಕೆ ನಿರತ ತಂಡವೊಂದು ಆರ್‌.ಟಿ.ಐ. ಕಾರ್ಯಕರ್ತನ ಮನೆಗೆ ಮಾರಕಾಸ್ತ್ರ ಸಹಿತ ಅಕ್ರಮವಾಗಿ ಪ್ರವೇಶಿಸಿ ಹಲ್ಲೆ ನಡೆಸಲು ಮುಂದಾದ ಘಟನೆ ಸಾಸ್ತಾನ ಸಮೀಪದ ಐರೋಡಿಯಲ್ಲಿ ಡಿ.24ರಂದು ನಡೆದಿದೆ.

Advertisement

ಇಲ್ಲಿನ ನಿವಾಸಿ ಥೋಮಸ್‌ ರೋಡಿಗ್ರಸ್‌ ಅವರ ಮನೆಯ ಅಂಗಳಕ್ಕೆ ಅರಾಟೆ ರಾಘವೇಂದ್ರ ಆಚಾರ್ಯ, ಕುಂಜಾಲು ಮನೋಜ್‌ ಆಚಾರ್ಯ, ಮೊವಾಡಿಯ ಸದಾ ಹಾಗೂ ನಾಗರಾಜ ಮೊವಾಡಿ, ರವಿ ಮೊಗವೀರ ಸೇನಾಪುರ, ಚಂದ್ರ ಅರಾಟೆ ಮೊದಲಾದವರು ಅಕ್ರಮ ಪ್ರವೇಶ ಮಾಡಿ, ಹೊಸಾಡು ಸೇನಾಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ವಿರೋಧಿಸಿ ಥೋಮಸ್‌ ನಡೆಸುತ್ತಿರುವ ಹೋರಾಟವನ್ನು ಕೊನೆಗೊಳಿಸುವಂತೆ, ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ತನಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಕೋಟ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.

ಆರೋಪಿಗಳು ಮನೆಯಂಗಳದಲ್ಲಿ ಗಲಾಟೆ ನಡೆಸುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಥೋಮಸ್‌ ಅವರ ವಿರುದ್ಧವೂ ಆ ತಂಡದವರು ಪ್ರತಿ ದೂರು ದಾಖಲಿಸಿದ್ದು ಅದು ಪ್ರಕರಣ ದಾಖಲಾಗಲಿದೆ ಎಂದು ಕೋಟ ಠಾಣಾಧಿಕಾರಿ ಮಧು ಬಿ.ಇ. ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next