Advertisement

ನಟ ಗಣೇಶ್‌ಗೆ 75 ಲಕ್ಷ ರೂ. ಪರಿಹಾರ

11:41 AM Apr 03, 2018 | |

ಬೆಂಗಳೂರು: ಅನುಮತಿ ಇಲ್ಲದೇ ಪ್ರಚಾರಕ್ಕೆ ಪೋಟೋ ಬಳಸಿದ ಹಿನ್ನೆಲೆಯಲ್ಲಿ ನಟ ಗಣೇಶ್‌ಗೆ, ಮೋಕ್ಷ ಅಗರಬತ್ತಿ ಕಂಪನಿ 75 ಲಕ್ಷ ರೂ. ಪರಿಹಾರ ನೀಡುವಂತೆ 15ನೇ ಸಿಟಿವಿ ಸಿವಿಲ್‌ ಕೋರ್ಟ್‌ ಆದೇಶ ನೀಡಿದೆ.

Advertisement

2007ರಲ್ಲಿ ಗಣೇಶ್‌ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾ ನಿರ್ದೇಶಕ, ನಿರ್ಮಾಪಕ ಎಸ್‌. ನಾರಾಯಣ್‌ ಮೋಕ್ಷ ಅಗರಬತ್ತಿ  ಕಂಪನಿ ಜತೆ ಜಾಹಿರಾತು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಸಿನಿಮಾದ ಚಿತ್ರಗಳನ್ನು ಅಗರಬತ್ತಿ ಜಾಹಿರಾತಿಗೆ ಬಳಸಿಕೊಳ್ಳಲಾಗಿತ್ತು.

ಆದರೆ ಚೆಲುವಿನ ಚಿತ್ತಾರ ಚಿತ್ರದ ಫೋಟೋಗಳ ಹೊರತಾಗಿ ಇತರೆ ಫೋಟೋಗಳನ್ನು ಅಗರಬತ್ತಿ ಕಂಪನಿ ಬಳಸಿಕೊಂಡಿದೆ ಎಂದು ಆರೋಪಿಸಿ 2008ರಲ್ಲಿ ನಟ ಗಣೇಶ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರ ಗಣೇಶ್‌ಗೆ  ತೀರ್ಪು ಪ್ರಕಟವಾದ 60 ದಿನಗಳ ಒಳಗೆ 75 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next