Advertisement

ರೋಶನ್ ಬೇಗ್ ಬಂಧನ ಹಣಕಾಸಿನ ವಿಚಾರಕ್ಕೆ, ಕಾಂಗ್ರೆಸ್ ಗೆ ಸಂಬಂಧಿಸಿದ್ದಲ್ಲ:ಸತೀಶ್ ಜಾರಕಿಹೊಳಿ

01:53 PM Nov 23, 2020 | keerthan |

ರಾಯಚೂರು: ರೋಶನ್ ಬೇಗ್ ಬಂಧನ ವಿಚಾರ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಿದ್ದು, ಅದಕ್ಕೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

Advertisement

ಮಸ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ನ್ಯಾಯಾಲಯ ನೋಡಿಕೊಳ್ಳುತ್ತದೆ. ಪಕ್ಷ ಅಂದರೆ ಸಮಸ್ಯೆ ಇರುವುದು ಸಾಮಾನ್ಯ. ಪಕ್ಷದಲ್ಲಿನ ನಾಯಕತ್ವ ವಿಚಾರ ಮಸ್ಕಿ ಚುನಾವಣೆಗೆ ಸಂಬಂಧವಿಲ್ಲ. ಪಕ್ಷ ಹಾಗೂ ಬಸನಗೌಡರ ಶಕ್ತಿಯಿಂದ ಚುನಾವಣೆ ಎದುರಿಸುತ್ತೇವೆ. ಪಕ್ಷ ಬಿಟ್ಟುಹೋದವರಿಗೆ ಜನ ಪಾಠ ಕಲಿಸುತ್ತಾರೆ ಎಂದರು.

ಇದನ್ನೂ ಓದಿ:ರೋಶನ್ ಬೇಗ್ ನಮ್ಮ ಪಕ್ಷದಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದರಾಮಯ್ಯ

ಪಕ್ಷದಿಂದ ಯಾವುದೇ ಸಮಸ್ಯೆಯಿಲ್ಲ ವ್ಯಕ್ತಿಯಿಂದ ಸಮಸ್ಯೆಯಾಗಿದೆ. ಆರ್ ಆರ್ ನಗರ, ಶಿರಾ ಸೋಲು ಬೇರೆ ಇಲ್ಲಿನ ಚುನಾವಣೆಯೇ ಬೇರೆ ಎಂದ ಅವರು, ನೀರಾವರಿ ಯೋಜನೆಗಳೆಲ್ಲ ಕಾಂಗ್ರೆಸ್ ನ ಕನಸಿನ ಯೋಜನೆಗಳು. ಬಿಜೆಪಿ ಯಾವುದೇ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.

ಪಕ್ಷ ಸಂಘಟನೆ ಮಾಡಲು ಸಮಾವೇಶಗಳನ್ನು ಮಾಡುತ್ತಿದ್ದೇವೆ. ಮಸ್ಕಿಯಲ್ಲಿ ಪಕ್ಷ ಬಲಪಡಿಸುವುದು ನಮ್ಮ ಕರ್ತವ್ಯ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next